ಚಿಕಿತ್ಸೆಗೆ ಪುತ್ತಿಲ ಪರಿವಾರದಿಂದ ಆರ್ಥಿಕ ನೆರವು

0

ಪುತ್ತೂರು: ಮೆದುಳಿನ ಕಾಯಿಲೆಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಪುತ್ತಿಲ ಪರಿವಾರದ ಕೆಮ್ಮಿಂಜೆ ವಾರ್ಡಿನ ಕಾರ್ಯದರ್ಶಿಯಾದ ಬಾಲಕೃಷ್ಣ ಗೌಡರವರ ಮಗನ ಚಿಕಿತ್ಸೆಗೆ ಪರಿವಾರದಿಂದ ರೂ.1ಲಕ್ಷದ ಆರ್ಥಿಕ ನೆರವು ನೀಡಲಾಯಿತು.


ಬಾಲಕೃಷ್ಣ ಗೌಡ ಅವರ ಮಗನ ಚಿಕಿತ್ಸೆಗೆ ಸುಮಾರು ರೂ. 10 ಲಕ್ಷದ ಅವಶ್ಯಕತೆಯಿದ್ದು, ಇದನ್ನು ಮನಗಂಡ ಪುತ್ತಿಲ ಪರಿವಾರದ ವತಿಯಿಂದ ಒಂದು ದಿನದಲ್ಲಿ ಸಂಗ್ರಹಿಸಿದ ರೂ. 1 ಲಕ್ಷ ರೂಪಾಯಿಯ ಚೆಕ್ ಅನ್ನು ಬಾಲಕೃಷ್ಣ ಗೌಡರಿಗೆ ಅರುಣ್ ಕುಮಾರ್ ಪುತ್ತಿಲ ಹಸ್ತಾಂತರಿಸಿದರು. ಪುತ್ತಿಲ ಪರಿವಾರದ ಪ್ರಮುಖರು ಉಪಸ್ಥಿತರಿದ್ದರು. ಚಿಕಿತ್ಸೆಗೆ
ಇನ್ನೂ ಹೆಚ್ಚಿನ ಹಣಕಾಸಿನ ನೆರವು ಈ ಕುಟುಂಬಕ್ಕಿದ್ದು ದಾನಿಗಳು ಕೈ ಜೋಡಿಸುವಂತೆ ಪುತ್ತಿಲ ಪರಿವಾರ ವಿನಂತಿಸಿದೆ.

LEAVE A REPLY

Please enter your comment!
Please enter your name here