ಅಂತರ್‌ ವಿಶ್ವವಿದ್ಯಾಲಯ ಮಟ್ಟದ ಕಬಡ್ಡಿಗೆ ಶ್ರವಣ್‌ ಗೌಡ ಆಯ್ಕೆ

0

ಬೆಂಗಳೂರು ಆಚಾರ್ಯ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ವರ್ಷದ ಎಂಬಿಎ ವ್ಯಾಸಂಗ ಮಾಡುತ್ತಿರುವ ಶ್ರವಣ್‌ ಗೌಡ ಬೆಳಗಾವಿಯ ತಾಂತ್ರಿಕ ವಿಶ್ವ ವಿದ್ಯಾನಿಲಯದ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿರುತ್ತಾರೆ.
ಇವರು ಎಸ್‌ ಐಟಿ ತುಮಕೂರಿನಲ್ಲಿ ನಡೆದ ಆಯ್ಕೆ ಶಿಬಿರದಲ್ಲಿ ಅತ್ಯುತ್ತುಮ ಸಾಧನೆ ಮಾಡಿ ತಂಡದಲ್ಲಿ ಸ್ಥಾನ ಪಡೆದು ಪಡೆದುಕೊಂಡಿರುತ್ತಾರೆ.


ಆಂದ್ರಪ್ರದೇಶದ ಕಾಕಿನಾಡಿನ ಜವಹರ್‌ ಲಾಲ್‌ ನೆಹರು ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ನ.9ರಿಂದ 12 ರ ವರೆಗೆ ನಡೆಯುವ ದಕ್ಷಿಣ ವಲಯ ಅಂತರ್‌ ವಿಶ್ವವಿದ್ಯಾಲಯ ಮಟ್ಟದ ಕಬಡ್ಡಿ ಕ್ರೀಡಾ ಕೂಟದಲ್ಲಿ ಭಾಗವಹಿಸಲಿದ್ದಾರೆ. ಸತತ 2ನೇ ಬಾರಿ ವಿಶ್ವ ವಿದ್ಯಾನಿಲಯದ ತಂಡಕ್ಕೆ ಆಯ್ಕೆಯಾಗಿರುವ ಇವರು ಶಾಂತಿಗೋಡು ಗ್ರಾಮದ ಪಾದೆ ಮೋಹನ ಗೌಡ ಮತ್ತು ನರಿಮೊಗ್ರು ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷೆ ಲತಾ ಮೋಹನ್‌ ಗೌಡ ಇವರ ಸುಪುತ್ರ.

LEAVE A REPLY

Please enter your comment!
Please enter your name here