ತಿಂಗಳಾಡಿ ರೋಟರಾಕ್ಟ್ ಕ್ಲಬ್‌ ಮತ್ತು‌ ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದಿಂದ ದಂತ ಚಿಕಿತ್ಸಾ ಶಿಬಿರ

0

ಪುತ್ತೂರು; ತಿಂಗಳಾಡಿ ರೋಟರಾಕ್ಟ್ ಕ್ಲಬ್‌ ಮತ್ತು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ದಂತ ಚಿಕಿತ್ಸಾ ಶಿಬಿರ ತಿಂಗಳಾಡಿ ಕೆದಂಬಾಡಿ ಗ್ರಾ ಪಂ ಸಭಾಭವನದಲ್ಲಿ ರೋಟರ್ಯಕ್ಟ್ ಕ್ಲಬ್ ತಿಂಗಳಾಡಿ ಮತ್ತು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು,ಕೆದಂಬಾಡಿ ಗ್ರಾಮ ಸಮಿತಿ ಇದರ ಜಂಟಿ ಆಶ್ರಯದೊಂದಿಗೆ ಇತ್ತೀಚೆಗೆ ಉಚಿತ ದಂತ ಚಿಕಿತ್ಸೆ ಶಿಬಿರ ಎ ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮಂಗಳೂರಿನ ವೈದ್ಯರಿಂದ ನಡೆಯಿತು.

ದೀಪ ಬೆಳಗಿಸಿ ಸುಭಾಷ್ ರೈ ಕಡಮಜಲ್ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾ.ಪ.ಅಧ್ಯಕ್ಷೆ ಸುಜಾತ ಮುಳಿಗದ್ದೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅತಿಥಿ ಸ್ಥಾಪಕಧ್ಯಕ್ಷ ರೋಟರ್ಯಕ್ಟ್ ಕ್ಲಬ್ ತಿಂಗಳಾಡಿ ರೊ.ಪಿ.ಎಚ್.ಎಫ್ ರತ್ನಕರ್ ರೈ ಜಿ, ಕೆ.ಗ್ರಾ.ಪಂ ಉಪಾಧ್ಯಕ್ಷೆ ಜಯಲಕ್ಷ್ಮಿ ಬಳ್ಳಾಲ್ ಬೀಡು, ಎ.ಜಿ ಆಸ್ಪತ್ರೆ ಮಂಗಳೂರು ಮತ್ತು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಸ್ಠಾನ ಎಂ.ಡಿ.ಎಸ್ ಡಾ‌. ಅತಿರ ಪುರುಷೋತ್ತಮನ್, ಕೆದಂಬಾಡಿ ಗ್ರಾಮ ಸಮಿತಿ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ,ಕಾರ್ಯದರ್ಶಿ ಕೃಷ್ಣ ಕುಮಾರ್ ಇದ್ಯಾಪೆ ,ಕೋಶಾಧಿಕಾರಿ ಬಾಲಕೃಷ್ಣ ಚೌಟ ಪಟ್ಟತ್ತಡ್ಕ, ತಿಂಗಳಾಡಿ ರೋಟರ್ಯಕ್ಟ್ ಕ್ಲಬ್ ಅಧ್ಯಕ್ಷ ಹರ್ಷಿತ್ ರೈ ಕೆ, ಕಾರ್ಯದರ್ಶಿ ಹರೀಶ್ ರೈ ಎಂ, ಕ್ಲಬ್ ಸಲಹೆಗಾರರಾದ ಅನೀಶ್ ಶೆಟ್ಟಿ ,ನಿಕಟ ಪೂರ್ವಾಧ್ಯಕ್ಷ ಪ್ರದ್ವಿನ್ ರೈ ಕೆ ,ಎ.ಕೆ ಜಯರಾಮ ರೈ ,ರಮೇಶ್ ರೈ ಬೊಳ್ಳಿಕಲ ಮಠ ,ಸೂರ್ಯಪ್ರಸನ್ನ ರೈ ,ಕ್ಲಬ್ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here