ಯಾರೋ ಸ್ಟೇಟ್ ಮೆಂಟ್ ಕೊಟ್ಟ ಕೂಡಲೆ ಯಾವುದೇ ಕಾಮಗಾರಿ ಆಗುದಿಲ್ಲ- ಆಗಿರುವುದೆಲ್ಲಾ ನಿತಿನ್ ಗಡ್ಕರಿ, ಮೋದಿಯವರ ಆಸಕ್ತಿ ಮತ್ತು ನನ್ನ ಒತ್ತಡದಿಂದ – ನಳಿನ್ ಕುಮಾರ್ ಕಟೀಲ್

0

ಪುತ್ತೂರು: ನಮ್ಮ ಅವಧಿ ಮುಗಿದಾಗ ಜಿಲ್ಲೆಯ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ಮುಗಿಯಲಿದೆ. ಪೂರ್ಣವಾಗಿರುವ ಕಾಮಗಾರಿ ಆಗಲು ರಾಜ್ಯವಲ್ಲ, ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಕಾರಣ. ಹಾಗಾಗಿ ಯಾರೋ ಸ್ಟೇಟ್ ಮೆಂಟ್ ಕೊಟ್ಟ ಕೂಡಲೇ ಯಾವುದೇ ಕಾಮಗಾರಿ ಆಗುದಿಲ್ಲ. ಆಗಿರುವುದೆಲ್ಲಾ ನಿತಿನ್ ಗಡ್ಕರಿಯವರ ಆಸಕ್ತಿ ಮತ್ತು ನನ್ನ ಒತ್ತಡದಿಂದ ಎಂದು ರಾಜ್ಯ ಬಿಜೆಪಿ ನಿಕಟಪೂರ್ವ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಪುತ್ತೂರು ನೆಹರೂ ನಗರದ ರೈಲ್ವೇ ಮೇಲ್ಸೇತುವೆ ಪುನರ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾಧ್ಯಮದ ಜೊತೆ ಮಾತನಾಡಿದರು.

LEAVE A REPLY

Please enter your comment!
Please enter your name here