ಪುರುಷರಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗೆ ಆಯ್ಕೆ

0

ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಸಂತೋಷ್, ಖಜಾಂಚಿ ಕಾರ್ತಿಕ್ ಪೂಜಾರಿ

ಪುತ್ತೂರು: ಪುರುಷರಕಟ್ಟೆಯ ಶ್ರೀಮಹಾಲಿಂಗೇಶ್ವರ ದೇವರ ಕಟ್ಟೆ ಮುಂಭಾಗದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೂತನ ಅಧ್ಯಕ್ಷರಾಗಿ ರವಿ ಕುಮಾರ್ ಮಾಯಂಗಲ, ಕಾರ್ಯದರ್ಶಿಯಾಗಿ ಸಂತೋಷ್ ಎಂ. ಮುಕ್ವೆ ಹಾಗೂ ಖಜಾಂಚಿಯಾಗಿ ಕಾರ್ತಿಕ್ ಪೂಜಾರಿ ಇಂದಿರಾನಗರರವರು ಆಯ್ಕೆಯಾಗಿದ್ದಾರೆ.


ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ವಿಶ್ವನಾಥ ಪುರುಷರವರ ಅಧ್ಯಕ್ಷತೆಯಲ್ಲಿ ನಡೆದ 23ನೇ ವರ್ಷದ ಗಣೇಶೋತ್ಸವದ ಲೆಕ್ಕಪತ್ರ ಮಂಡನಾ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ ವಿಶ್ವನಾಥ ಪುರುಷರವರು ಲೆಕ್ಕಪತ್ರ ಮಂಡಿಸಿದರು. ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಹರೀಶ್ ದೇವಾಡಿಗ, ಖಜಾಂಚಿ ಕೃಷ್ಣಪ್ಪ ಶೆಟ್ಟಿಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷರಾದ ಉಮೇಶ್ ಎಂ ಇಂದಿರಾನಗರ, ಶರತ್‌ಚಂದ್ರ ಬೈಪಾಡಿತ್ತಾಯ ಬಜಪ್ಪಳ, ಪ್ರಮುಖರಾದ ಪ್ರಕಾಶ್ ಪುರುಷರಕಟ್ಟೆ, ಬೇಬಿಜಾನ್ ಕೂಡುರಸ್ತೆ, ಸತೀಶ್ ಇಂದಿರಾನಗರ, ರವಿ ಕೋಡಿಮಜಲು, ರವೀಂದ್ರ ರೈ ನೆಕ್ಕಿಲು, ದಿನೇಶ್ ಇಂದಿರಾನಗರ, ಆನಂದ ಕೋಡಿಮಜಲು, ಸುರೇಶ್ ಕೋಡಿಮಜಲು ಹಾಗೂ ಕಿಶನ್ ಸರೋಳಿ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here