ಪುತ್ತೂರು ನಾಟ್ಯರಂಗ ಪ್ರಸ್ತುತ ಪಡಿಸಿದ ನೃತ್ಯ – ಹರ್ಷ ಕಾರ್ಯಕ್ರಮ

0

ಪುತ್ತೂರು:ಪುತ್ತೂರು ನಾಟ್ಯ ರಂಗ ಪ್ರಸ್ತುತ ಪಡಿಸಿದ ನೃತ್ಯ – ಹರ್ಷ ಕಾರ್ಯಕ್ರಮವು ವಿವೇಕಾನಂದ ಕನ್ನಡ ಶಾಲಾ ಸಭಾಂಗಣದಲ್ಲಿ ನಡೆಯಿತು.ಕರ್ನಾಟಕ ಕಲಾಶ್ರೀ ಶಾರದಾ ಮಣಿ ಶೇಖರ್ ದೀಪ ಪ್ರಜ್ವಲಿಸಿ ಮಾತನಾಡಿ “ಕಲೆ ವ್ಯಕ್ತಿತ್ವವನ್ನು ಅರಳಿಸುತ್ತದೆ. ಬಾಲ್ಯದಿಂದಲೇ ಮಕ್ಕಳಿಗೆ ಹೆತ್ತವರಾದ ನಾವು ನೀಡುವ ಪ್ರೋತ್ಸಾಹ, ಪ್ರೇರಣೆ ಮಕ್ಕಳಲ್ಲಿ ಕಲಾಸಕ್ತಿಯನ್ನು ಬೆಳೆಸುತ್ತದೆ. ಈ ನಿಟ್ಟಿನಲ್ಲಿ ನೃತ್ಯ, ರಂಗಕಲೆಯಲ್ಲಿ ಸ್ವ -ಸಾಮರ್ಥ್ಯ ಹಾಗೂ ನಿರಂತರ ಶ್ರಮಗಳಿಂದ ವಿಭಿನ್ನ ಆಲೋಚನೆ ಹಾಗೂ ಅನುಷ್ಠಾನಗಳಿಂದ ಗುರುತಿಸಿಕೊಂಡಿರುವ ನೃತ್ಯ ಗುರುಗಳಾದ ಮಂಜುಳಾಶ್ರಬ್ರಹ್ಮಣ್ಯ ಇವರ ಸಾರಥ್ಯದಲ್ಲಿ ಮಕ್ಕಳ ಕಲಾ ಪ್ರಜ್ಞೆ ಅರಳಿ ಬೆಳಗಲಿ ಎಂದು ಶುಭ ಹಾರೈಸಿದರು.

ಅಭ್ಯಾಗತರಾಗಿ ಉಪಸ್ಥಿತರಿದ್ದ ಶಾಲಾ ಆಡಳಿತ ಸಮಿತಿಯ ಸದಸ್ಯೆ ,ದಂತ ವೈದ್ಯೆ ಆಶಾ “ಭಾರತೀಯ ಶ್ರೇಷ್ಠ ಕಲಾ ಪ್ರಕಾರವಾದ ಶಾಸ್ತ್ರೀಯ ನೃತ್ಯ ಅಭಿನಯಕ್ಕೆ ಸಾಕ್ಷಿಯಾದ ವಿವೇಕಾನಂದ ಕನ್ನಡ ಶಾಲೆ ಸದಾ ಈ ಬಗೆಯ ಕಾರ್ಯಕ್ರಮಗಳಿಗೆ ಸ್ಪಂದಿಸುತ್ತಲೇ ಬಂದಿದೆ ಎಂದರು.

ವಿದುಷಿ ಮಂಜುಳಾ ಸುಬ್ರಹ್ಮಣ್ಯ ಇವರ ನಿರ್ದೇಶನದಲ್ಲಿ ಮೂಡಿ ಬಂದ ನೃತ್ಯ ಹರ್ಷ ದ ಹಾಡುಗಾರಿಕೆಯಲ್ಲಿ ಪವಿತ್ರ ವಿನಯ ,ಮೃದಂಗದಲ್ಲಿ ಚಂದ್ರಶೇಖರ ಗುರುವಾಯನಕೆರೆ, ಕೊಳಲು ವಾದನದಲ್ಲಿ ಕೃಷ್ಣ ಗೋಪಾಲ ಪುಂಜಾಲಕಟ್ಟೆ ಸಹಕರಿಸಿದರು. ವೇದಿಕೆಯ ಬೆಳಕಿನ ನಿರ್ವಹಣೆಯಲ್ಲಿ ಪೃಥ್ವಿನ್ ಉಡುಪಿ, ಪ್ರಸಾದನ ಸಹಕಾರ ಶಿವರಾಮ ಕಲ್ಮಡ್ಕ ಹಾಗೂ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಅಶ್ವತ್ ಸೌಂಡ್ಸ್ ಮತ್ತು ಲೈಟ್ಸ್ ಪುತ್ತೂರು ಸಹಕರಿಸಿದರು. ನಾಟ್ಯರಂಗದ ಪೋಷಕಿ ಕವಿತಾ ಅಡೂರು ಹಾಗೂ ರುದ್ದಿ ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ನೃತ್ಯ ಗುರು ಮಂಜುಳಾ ಸುಬ್ರಹ್ಮಣ್ಯ ವಂದಿಸಿದರು. ಅವನಿ ಬೆಳ್ಳಾರೆ ,ಹಾಗೂ ಕೀರ್ತನ ವರ್ಮ, ಶರ್ವಿನ ಶೆಟ್ಟಿ, ಮೇಧಾ ಭಟ್, ಪ್ರಜ್ಞ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here