ಕೆನಡಾದ ನಿವೃತ್ತ ಪ್ರೊಫೆಸ್ಸರ್ ಡಾ| ಕುಶಾಲಪ್ಪ ಗೌಡ ಅಭಿಕಾರ ನಿಧನ

0

ಕಾಣಿಯೂರು: ಚಾರ್ವಾಕ ಇಡ್ಯಡ್ಕ ಬಾರೆಂಗಳಗುತ್ತು ನಿವಾಸಿ ಡಾ. ಕುಶಾಲಪ್ಪ ಗೌಡ (90 ವ.)ಅವರು ಅಲ್ಪಕಾಲದ ಅಸೌಖ್ಯದಿಂದ ನ.22ರಂದು ಬಾರೆಂಗಳಗುತ್ತು ಮನೆಯಲ್ಲಿ ನಿಧನಹೊಂದಿದ್ದರು.

ಕುಶಾಲಪ್ಪ ಗೌಡರು ಬನಾರಸ್ ವಿ.ವಿ.ಯಲ್ಲಿ ಎಂ.ಎಸ್ಸಿ ವ್ಯಾಸಂಗ ಮುಗಿಸಿ ಬಳಿಕ ಕೆನಡಾದಲ್ಲಿ ಪಿಎಚ್‌ಡಿ ಮಾಡಿ ಕೆನಡಾದಲ್ಲಿಯೇ ಪ್ರೊಫೆಸ್ಸರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದರು. ನಿವೃತ್ತಿಯ ಬಳಿಕ ಪುತ್ತೂರಿಗೆ ಆಗಮಿಸಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇವರು ಪುತ್ತೂರು ರೋಟರಿ ಕ್ಲಬ್‌ನ ಸಕ್ರಿಯ ಸದಸ್ಯರಾಗಿದ್ದರು.

ಮೃತರು ಪುತ್ರಿಯರಾದ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಉಪನಿರ್ದೇಶಕಿ ಡಾ. ಆಶಾ ಅಭಿಕಾರ್, ಡಾ. ಅನಿತಾ ಅಭಿಕಾರ್, ಡಾ.ಅರುಣಾ ಅಭಿಕಾರ್, ಅಳಿಯಂದಿರಾದ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಮಾಜಿ ಆಡಳಿತ ಸಮಿತಿ ಅಧ್ಯಕ್ಷ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ, ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕ, ಡಾ. ರಾಜೇಶ್, ಸಾಫ್ಟ್ ಫೇರ್ ಇಂಜಿನಿಯರ್ ಸೇನಿಯೋ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ..

LEAVE A REPLY

Please enter your comment!
Please enter your name here