ಇರ್ದೆ: ದರ್ಬೆ ರಾಮ ಭಟ್ ದೆಯ್ಯಾರಡ್ಕ ನಿಧನ

0

ನಿಡ್ಪಳ್ಳಿ: ಇರ್ದೆ ಗ್ರಾಮದ ದರ್ಬೆ ದೆಯ್ಯಾರಡ್ಕ ನಿವಾಸಿ ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ರಾಮ ಭಟ್ ದೆಯ್ಯಾರಡ್ಕ( 93) ಇವರು ನ.21ರಂದು ಸ್ವಗೃಹದಲ್ಲಿ ನಿಧನರಾದರು.

ಇವರು ಬೆಟ್ಟಂಪಾಡಿ ನವೋದಯ ವಿದ್ಯಾಸಮಿತಿಯ ಸ್ಥಾಪಕ ಸದಸ್ಯರಾಗಿ,ಕೋಶಾಧಿಕಾರಿಯಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ಪ್ರೌಢಶಾಲೆಯ ಸರ್ವತೋಮುಖ ಬೆಳವಣಿಗೆಗೆ ಕಾರಣ ಕರ್ತರಾಗಿದ್ದರು. ಮಾತ್ರವಲ್ಲ ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ‌ ಸೇವೆ ಸಲ್ಲಿಸಿದ್ದ ಇವರು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು.
ಮೃತರು ಪತ್ನಿ ಪಾರ್ವತಿ, ಪುತ್ರ  ಉದಯ ಕೃಷ್ಣ, ಪುತ್ರಿಯರಾದ ಪ್ರೇಮ, ಪ್ರಸನ್ನ ಮತ್ತು ಶೈಲಜಾ, ಸೊಸೆ ಗಾಯತ್ರಿ ಹಾಗೂ ಮೊಮ್ಮಕ್ಕಳು, ಮರಿ ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here