ಮಾಣಿ-ಕೊಡಾಜೆಯಲ್ಲಿ ವೆಜ್-ನಾನ್ ವೆಜ್ ಕೆ.ಎಸ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

0

ಪುತ್ತೂರು: ಮಾಣಿ-ಮೈಸೂರು ರಸ್ತೆಯ ಕೊಡಾಜೆ ಗಣೇಶ್ ನಗರ ನಿಧಾ ಆರ್ಕೇಡ್ ಎಂಬಲ್ಲಿ ಶುಚಿ-ರುಚಿಯಾದ ವೆಜ್ ಹಾಗೂ ನಾನ್ ವೆಜ್ ಖಾದ್ಯಗಳ ಕೆ.ಎಸ್ ಫ್ಯಾಮಿಲಿ ರೆಸ್ಟೋರೆಂಟ್ ನ.23 ರಂದು ಶುಭಾರಂಭಗೊಂಡಿತು.


ಖತೀಬರಾದ ಉನೈಝ್ ಫೈಝಿ ಕೂರ್ನಡ್ಕ ಇವರು ದುವಾ ನೆರವೇರಿಸಿ ಶುಭ ಹಾರೈಸಿದರು. ನೂತನ ರೆಸ್ಟೋರೆಂಟ್ ಅನ್ನು ಉಮ್ಮರ್ ಮುಸ್ಲಿಯಾರ್ ನಂಜೆ ಹಾಗೂ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ಜೊತೆಗೂಡಿ ರಿಬ್ಬನ್ ಕತ್ತರಿಸಿ ಉದ್ಘಾಟಿಸಿ, ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಅಬ್ದುಲ್ ಅಝೀಜ್ ಧಾರಿಮಿ ಕೊಡಾಜೆ, ಪ್ರಸನ್ನ ಕುಮಾರ್ ಶೆಟ್ಟಿ ಸಿಝ್ಲರ್ ಸಾಮೆತ್ತಡ್ಕ, ಸುದೀಪ್ ಶೆಟ್ಟಿ ಮಾಣಿ, ನಾಗಾರಾಜ್ ಶೆಟ್ಟಿ ಮಾಣಿ, ಇಬ್ರಾಹಿಂ ಹಾಜಿ ರಾಜ್ ಕಮಲ್, ಹಮೀದ್ ಹಾಜಿ ಕೊಡಾಜೆ, ರಹೀಂ ಸುಲ್ತಾನ್ ಕೊಡಾಜೆ, ಫಾರೂಕ್ ಸುಲ್ತಾನ್ ಕೊಡಾಜೆ, ಇಸ್ಮಾಯಿಲ್ ಜನಪ್ರಿಯ, ರಫೀಕ್ ಹಾಜಿ ಸುಲ್ತಾನ್ ಕೊಡಾಜೆ, ಉಮ್ಮರ್ ಹಾಜಿ ರಾಜ್ ಕಮಲ್, ಹನೀಫ್ ಖಾನ್ ಕೊಡಾಜೆ, ಕೆ.ಎಚ್ ಖಾಸಿಂ ಹಾಜಿ ಕೂರ್ನಡ್ಕ, ಅಬೂಬಕ್ಕರ್ ಕೂರ್ನಡ್ಕ, ಮೊಹಮದ್ ಸಾಹೆಬ್ ಕೂರ್ನಡ್ಕ, ಫಾರೂಕ್ ಎಲ್.ಟಿ ಕೂರ್ನಡ್ಕ, ಲತೀಫ್ ನೇರಳಕಟ್ಟೆ, ಉಮ್ಮರ್ ಕರಾವಳಿ, ಹಾಫಿಲ್ ಕೆ.ಎಂ ಕೂರ್ನಡ್ಕ, ಬಶೀರ್ ಪರ್ಲಡ್ಕ, ಜೈನುಲ್ ಅಕ್ಬರ್, ಸಿರಾಜ್ ಕೂರ್ನಡ್ಕ, ಸಿದ್ಧೀಕ್ ಕೆ.ಎಸ್ ಕೂರ್ನಡ್ಕ, ಸಾರ್ಥಕ್ ಶೆಟ್ಟಿ ಮುಂಬೈ, ವಿಕಾಸ್ ರೈ ಉಪ್ಪಳಿಗೆ, ಶರೀಕ್ ಅರಫಾ, ಪ್ರಖ್ಯಾತ್ ಸಾಲಿಯಾನ್ ಬೆಟ್ಟಂಪಾಡಿ, ಜಬ್ಬಾರ್ ಏಷಿಯನ್ ವುಡ್ಸ್, ಝುನೈದ್ ರೆಡ್ ಪ್ಲೈ, ಮನ್ಸೂರ್ ರೆಡ್ ಗೈಯ್ಸ್, ನ್ಯಾಯವಾದಿ ಶಾಕೀರ್, ಜಬ್ಬಾರ್ ಐಡಿಯಲ್ ಕೂರ್ನಡ್ಕ ಸಹಿತ ಹಲವರು ಆಗಮಿಸಿ ಶುಭ ಹಾರೈಸಿದ್ದಾರೆ.

-ವಿವಿಧ ರೀತಿಯ ಮೀನಿನ ಹಾಗೂ ಚಿಕನ್ ಖಾದ್ಯಗಳು, ತಾಜಾ ಹಣ್ಣಿನ ಜ್ಯೂಸ್ ಗಳು, ಐಸ್ ಕ್ರೀಂ, ಗಡ್ಬಡ್ ಮುಂತಾದುವು ದೊರೆಯುತ್ತದೆ. ಗ್ರಾಹಕರು ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ 910854818 ನಂಬರಿಗೆ ಸಂಪರ್ಕಿಸಬಹುದು ಎಂದು ನೂತನ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here