ಕಕ್ಕೂರು ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದ ಬಾಲಾಲಯ ಪ್ರತಿಷ್ಠೆಯ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಪುನರ್ ನಿರ್ಮಾಣಗೊಳ್ಳಲಿರುವ ಬೆಟ್ಟಂಪಾಡಿ ಗ್ರಾಮದ ಕಕ್ಕೂರು ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದಲ್ಲಿ ಡಿ.7ರಂದು ನಡೆಯಲಿರುವ ದ್ವಾದಶ ನಾರಿಕೇಳ ಗಣಪತಿ ಹವನ ಹಾಗೂ ಬಾಲಾಲಯ ಪ್ರತಿಷ್ಠೆಯ ಆಮಂತ್ರಣ ಪತ್ರಿಕೆಯು ನ.25ರಂದು ಬಿಡುಗಡೆಗೊಂಡಿತು.

ನಿಡ್ಪಳ್ಳಿ ಗ್ರಾ.ಪಂ ಅಧ್ಯಕ್ಷ ವೆಂಕಟರಮಣ ಬೋರ್ಕರ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಬೆಟ್ಟಂಪಾಡಿ ಗ್ರಾ.ಪಂ ಉಪಾಧ್ಯಕ್ಷ ಮಹೇಶ್ ಕೋರ್ಮಂಡ, ಸದಸ್ಯರಾದ ನವೀನ್ ರೈ ಚೆಲ್ಯಡ್ಕ, ವಿನೋದ್ ಕುಮಾರ್ ರೈ ಗುತ್ತು, ಮಹಾಲಿಂಗ ನಾಯ್ಕ, ಗಂಗಾಧರ ಗೌಡ, ಪಾರ್ವತಿ ಲಿಂಗಪ್ಪ ಗೌಡ ಮಿತ್ತಡ್ಕ, ಸಿದ್ದಿ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಕುಲಾಲ್, ಭಜನಾ ಮಂದಿರದ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಜಯಪ್ರಕಾಶ್ ರೈ ಚೆಲ್ಯಡ್ಕ, ಪ್ರಮುಖರಾದ ಚಂದ್ರನ್ ಮಣಿಯಾಣಿ ತಲೆಪ್ಪಾಡಿ, ಪ್ರೇಮಲತಾ ಜೆ.ರೈ, ಸತ್ಯನಾರಾಯಣ ಮಣಿಯಾಣಿ, ರಾಮಯ್ಯ ರೈ ಕಕ್ಕೂರು, ರಾಮಚಂದ್ರ ಗೌಡ, ಶಿವಪ್ರಸಾದ್ ರೈ ನುಳಿಯಾಲು, ರಜಿತಾ ಎಲ್ ಗೌಡ, ಲಕ್ಷ್ಮೀ ನಾರಾಯಣ ರೈ ಡೆಮ್ಮಂಗರ ಮೊದಲಾದವರು ಉಪಸ್ಥಿತರಿದ್ದರು. ಅಚ್ಚುತ ಭಟ್ ಕಕ್ಕೂರು ಸ್ವಾಗತಿಸಿ, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕಕ್ಕೂರು ವಂದಿಸಿದರು.

LEAVE A REPLY

Please enter your comment!
Please enter your name here