ಇರ್ದೆ ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಶ್ರಮದಾನ

0

ನಿಡ್ಪಳ್ಳಿ: ಇರ್ದೆ ಬೆಟ್ಟಂಪಾಡಿ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಿಂದ  ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ಪಾಣಾಜೆ ಆರ್ಲಪದವು ಸುಬೋಧ ಪ್ರೌಢ ಶಾಲೆಯಲ್ಲಿ ನ.25ರಂದು ಶಾಲೆಯ ಕಂಪೌಂಡ್ ಒಳಗೆ ಇದ್ದ ಮರ, ಗಿಡ, ಹುಲ್ಲು ಗಳನ್ನು ತೆಗೆದು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.

ಶಾಲೆಯ ಮುಖ್ಯಗುರು ಶ್ರೀಪತಿ ಭಟ್, ಶಾಲೆಯ ಸಂಚಾಲಕ ಮಹಾಬಲೇಶ್ವರ ಭಟ್, ಉಪಾಧ್ಯಕ್ಷರಾದ ಈಶ್ವರ ಭಟ್, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.ಸಂಚಾಲಕ ಮಹಾಬಲೇಶ್ವರ ಭಟ್ ಶುಭ ಹಾರೈಸಿ ವಂದಿಸಿದರು. ಸದಸ್ಯರಾದ ಆನಂದ, ಸುಬ್ರಹ್ಮಣ್ಯ , ದಿನೇಶ್, ಸುಂದರ, ಹರಿಪ್ರಸಾದ್ ಎ. ಬಿ, ಜಲಜಾಕ್ಷಿ, ಪದ್ಮಾವತಿ.ಡಿ, ಹೇಮಾವತಿ ಶ್ರಮದಾನದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here