ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ-ಹಾರಾಡಿ ಶಾಲಾ ವಿದ್ಯಾರ್ಥಿ ಆಯುಷ್‌ ಗೆ ಚಿನ್ನದ ಪದಕ

0

ಪುತ್ತೂರು: ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣಾಥೇಶ್ವರ ದೇವಾಲಯದ ಕೊರಗಪ್ಪ ಸಭಾಂಗಣದಲ್ಲಿ ನ.26ರಂದು ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪುತ್ತೂರು ಹಾರಾಡಿ ಶಾಲೆಯ ಆಂಗ್ಲ ಮಾಧ್ಯಮದ 3ನೇ ತರಗತಿ ವಿದ್ಯಾರ್ಥಿ ಆಯುಷ್‌ ಎಂ ಪಿ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಇವರು ಕರಾಟೆ ಮುಖ್ಯ ಶಿಕ್ಷಕ ಟಿ ಡಿ ತೋಮಸ್‌ ಅವರಿಂದ ತರಬೇತಿ ಪಡೆಯುತ್ತಿದ್ದು, ಮೋಹನ್‌ ಕುಮಾರ್‌ ಬಡಾವು ಮತ್ತು ಪ್ರಚಲಿತ ದಂಪತಿಗಳ ಪುತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here