ಯುವಕನಿಗೆ ಹಲ್ಲೆ- ಆರೋಪಿ ಬಸ್ ಚಾಲಕ ಖುಲಾಸೆ

0

ಪುತ್ತೂರು: 9 ತಿಂಗಳ ಹಿಂದೆ ಸವಣೂರು ಪರಣೆಯಲ್ಲಿ ಯುವಕನೋರ್ವನಿಗೆ ಹಲ್ಲೆ ನಡೆಸಿರುವ ಆರೋಪ ಎದುರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕನನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಮಾ.22ರಂದು ಸವಣೂರು ಪರಣೆ ಮಸೀದಿಗೆ ಬೈಕ್‌ನಲ್ಲಿ ಹೋಗುತಿದ್ದ ಬೆಳಂದೂರು ನಿವಾಸಿ ಅಶ್ರಫ್ ಎಂಬವರಿಗೆ, ಮುಂದೆ ಹೋಗುತ್ತಿದ್ದ ಬಸ್ ಸೈಡ್ ಕೊಡದಿರುವ ಕುರಿತು ಪರಣೆ ಬಸ್ ತಂಗುದಾಣದಲ್ಲಿ ಬಸ್ ಚಾಲಕ ನೆಕ್ಕಿಲಾಡಿ ನಿವಾಸಿ ಪ್ರಶಾಂತ್ ಅವರನ್ನು ಪ್ರಶ್ನಿಸಿದಾಗ ಅವರು ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಅಶ್ರಫ್ ಅವರು ಪೊಲೀಸರಿಗೆ ದೂರು ನೀಡಿದ್ದರು.‌ ಪೊಲೀಸರು ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. ಆರೋಪಿ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡು, ಮೋಹಿನಿ ಕೆ ವಾದಿಸಿದ್ದರು.

LEAVE A REPLY

Please enter your comment!
Please enter your name here