ವಿವೇಕಾನಂದ ಕಾಲೇಜಿಗೆ ರಾಜ್ಯಮಟ್ಟದ ವೈಟ್ ಲಿಫ್ಟಿಂಗ್ ನಲ್ಲಿ ಪ್ರಶಸ್ತಿ

0

ಪುತ್ತೂರು: ಕರ್ನಾಟಕ ರಾಜ್ಯ ವೇಟ್ ಲಿಫ್ಟರ್(lifters)ಲಿಫ್ಟರ್ಸ್ ಅಸೋಸಿಯೇಷನ್ ಇದರ ವತಿಯಿಂದ ಬೆಂಗಳೂರಿನಲ್ಲಿ ನ.17ರಿಂದ 20ರವರೆಗೆ ನಡೆಸಿದ 34ನೇ ರಾಜ್ಯಮಟ್ಟದ ಜೂನಿಯರ್ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ +87 ಕೆ ಜಿ ವಿಭಾಗದಲ್ಲಿ ಸ್ಪರ್ಧಿಸಿದ ದ್ವಿತೀಯ ಬಿ ಸಿ ಎ (ಡಿ) ರಕ್ಷಾ. ಜಿ ಬೆಳ್ಳಿಯ ಪದಕವನ್ನು ಗಳಿಸಿರುತ್ತಾರೆ.ಮಾಣಿಯ ಡೀಕಯ್ಯ ಪೂಜಾರಿ ಮತ್ತು ಎನ್.ಲಲಿತ ದಂಪತಿಯ ಪುತ್ರಿ.71 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ದ್ವಿತೀಯ ಬಿಕಾಂ (ಎ) ತರಗತಿಯ ಪ್ರೇಕ್ಷಿತ ಶೆಟ್ಟಿ ಇವರು ಕಂಚಿನ ಪದಕವನ್ನು ಗಳಿಸಿರುತ್ತಾರೆ. ಇವರು ವಿಟ್ಲ ಕೊಡಂಗಾಯಿಯ ಪ್ರಭಾಕರ ಶೆಟ್ಟಿ ಮತ್ತು ಶೋಭಲತಾ ವಿ ಶೆಟ್ಟಿ ಇವರ ಪುತ್ರಿ.


ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ಹಾಗೂ ಯತೀಶ್ ಕುಮಾರ್ ಹಾಗೂ ಡಾ. ಜ್ಯೋತಿ ಇವರು ತರಬೇತಿ ನೀಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರೊ. ಶ್ರೀಪತಿ ಕಲ್ಲೂರಾಯ,ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಮತ್ತು ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಹಾಗೂ ಉಪನ್ಯಾಸಕ ವರ್ಗ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here