ಕಬಕ ಕುವೆಹಿತ್ತಿಲುನಲ್ಲಿ ಕಾರು, ಬಸ್ ಮುಖಾಮುಖಿ ಡಿಕ್ಕಿ-ಇಬ್ಬರಿಗೆ ಗಾಯ

0

ಕಬಕ: ಇಲ್ಲಿಗೆ ಸಮೀಪದ ಮಾಣಿ-ಮೈಸೂರು ಹೆದ್ದಾರಿಯ ಕುವೆಹಿತ್ತಿಲು ತಿರುವಿನಲ್ಲಿ ಸರಕಾರಿ ಬಸ್ಸು ಹಾಗೂ ಕಾರಿನ ಮದ್ಯೆ ಮುಖಾಮುಖಿ ಡಿಕ್ಕಿಯಾದ ಘಟನೆ ಡಿ.2ರ ಮಧ್ಯಾಹ್ನ ನಡೆದಿದೆ.

ಪುತ್ತೂರು ನಿಂದ ಮಂಗಳೂರು ತೆರಳುವ ರಾಜ್ಯ ಸಾರಿಗೆ ಬಸ್ ಹಾಗೂ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಟಾಟಾ ಇಂಡಿಕಾ ಕಾರು ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಬಾಗಿಲು ತೆರೆಯಲು ಸಾದ್ಯವಾಗದೆ ಕಾರು ಚಾಲಕ ಕೆಲ ಹೊತ್ತು ಕಾರಿನಲ್ಲಿಯೇ ಸಿಲುಕಿಕೊಂಡಿದ್ದರು. ಕಬಕದ ಯುವಕರ ತಂಡ ಅಪಘಾತ ಸ್ಥಳಕ್ಕೆ ದಾವಿಸಿ ಕಬ್ಬಿಣದ ರಾಡ್ ನಿಂದ ಕಾರಿನ ಬಾಡಿ ಒಡೆದು ಗಾಯಾಳುವನ್ನು ಹೊರತೆಗೆದು ಬಳಿಕ ಆಸ್ಪತ್ರೆಗೆ ಸೇರಿಸಲಾಗಿದೆ. ಕಾರಿನಲ್ಲಿದ್ದ ಇಬ್ಬರು ಬಂಟ್ವಾಳ ತಾಲೂಕಿನ ನೆಟ್ಲ ಮೂಲದವರು ಎಂದು ತಿಳಿದು ಬಂದಿದೆ. ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here