‘ಕ್ರೀಡಾ ಕಾರಂಜಿ’ ಕ್ರೀಡಾಜ್ಯೋತಿಯ ರಥಕ್ಕೆ ಬೆಟ್ಟಂಪಾಡಿಯಲ್ಲಿ ಸ್ವಾಗತ

0

ಪ್ರಿಯದರ್ಶಿನಿ ಆ.ಮಾ.ಶಾಲೆ, ಗ್ರಾಮ ಪಂಚಾಯತ್ ಕಛೇರಿಯಲ್ಲಿ ಸ್ವಾಗತ

ಪುತ್ತೂರು: ಕಾರಂತರ ಕರ್ಮಭೂಮಿ ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯಮಟ್ಟದ 17ರ ವಯೋಮಾನದ ಬಾಲಕ ಬಾಲಕಿಯರ ಕ್ರೀಡಾಕೂಟದ ‘ಕ್ರೀಡಾ ಕಾರಂಜಿ’ ಕ್ರೀಡಾಜ್ಯೋತಿಯ ರಥ ಬೆಟ್ಟಂಪಾಡಿಗೆ ಆಗಮಿಸಿತು.

ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆ ಹಾಗೂ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಕಛೇರಿಯಲ್ಲಿ ರಥವನ್ನು ಸ್ವಾಗತಿಸಿ ಹಸಿರುವಾಣಿ ನೀಡಲಾಯಿತು. ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯಗುರು ರಾಜೇಶ್ ಎನ್. ಹಾಗೂ ಶಿಕ್ಷಕರು ಸ್ವಾಗತಿಸಿದರು. ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಕಛೇರಿ ಮುಂಭಾಗ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ, ಪಿಡಿಒ ಸೌಮ್ಯ, ಹಾಗೂ ಸದಸ್ಯರು, ಸಿಬಂದಿಗಳು ಸ್ವಾಗತಿಸಿದರು.

LEAVE A REPLY

Please enter your comment!
Please enter your name here