ಪುತ್ತೂರು: ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ನೇತೃತ್ವದಲ್ಲಿ ಕೊಂಬೆಟ್ಟಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯಮಟ್ಟದ 17ರ ವಯೋಮಾನದ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟದ ಪೂರ್ವಭಾವಿಯಾಗಿ ತಾಲೂಕಿನಾದ್ಯಂತ ತೆರಳಿದ ಕ್ರೀಡಾಜ್ಯೋತಿಗೆ ಡಿ.2ರಂದು ದರ್ಬೆಯಲ್ಲಿ ಸ್ವಾಗತಿಸಿ ಅದ್ದೂರಿಯ ಚಾಲನೆ ನೀಡಲಾಯಿತು.
ಶಾಸಕ ಅಶೋಕ್ ಕುಮಾರ್ ರೈ ,ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕ್ರೀಡಾ ಕಾರಂಜಿಯ ಕಾರ್ಯಾಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಜೊತೆಯಾಗಿ ಬೆಲೂನ್ ಹಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಕ್ರೀಡಾಜ್ಯೋತಿ ಇರುವ ಅಶ್ವರಥದ ಎದುರು ಗಣ್ಯರೆಲ್ಲರು ತೆಂಗಿನ ಕಾಯಿ ಒಡೆದರು. ಎಲ್ಲಾ ಅಧಿಕಾರಿ ವರ್ಗದವರು, ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು, ತರಬೇತುದಾರರು, ತೀರ್ಪುಗಾರರು, ಕ್ರೀಡಾಭಿಮಾನಿಗಳು, ಕ್ರೀಡಾಪೋಷಕರು ಮತ್ತು ಶಾಲಾವಿದ್ಯಾರ್ಥಿಗಳನ್ನು ಒಳಗೊಂಡಂತೆ ಶಿಲ್ಪ ಗೊಂಬೆ ಬಳಗ, ಚೆಂಡೆ ವಾದ್ಯ, ಬ್ಯಾಂಡ್ ಸೆಟ್ಗಳ ಮೂಲಕ ಭವ್ಯ ಮೆರವಣಿಗೆ ನಡೆದು ಕ್ರೀಡಾಜ್ಯೋತಿ ಮೆರವಣಿಗೆಯಲ್ಲಿ ಪಾಲ್ಗೊಂಡಿತು.
![](https://puttur.suddinews.com/wp-content/uploads/2023/12/b60c7b80-84d9-4895-9ca8-3e750f221932-1024x576.jpg)
![](https://puttur.suddinews.com/wp-content/uploads/2023/12/56a43a48-9a50-457c-8e5f-27ad1600e61d-1024x576.jpg)
![](https://puttur.suddinews.com/wp-content/uploads/2023/12/16c02c1f-9c91-4821-b91d-0e54f86ec0eb-1024x576.jpg)
![](https://puttur.suddinews.com/wp-content/uploads/2023/12/ec33b0ce-59bc-4212-b530-62333c425ec4-1024x576.jpg)
![](https://puttur.suddinews.com/wp-content/uploads/2023/12/5906c11d-2420-415c-b32f-5eca8662ef9d-1024x576.jpg)
![](https://puttur.suddinews.com/wp-content/uploads/2023/12/7bb7748e-b741-497d-82e4-72d34255fe98-1024x576.jpg)
![](https://puttur.suddinews.com/wp-content/uploads/2023/12/c518d3ed-e560-4d7c-b533-dc1368aa4589-1024x576.jpg)
![](https://puttur.suddinews.com/wp-content/uploads/2023/12/5d849182-163e-4d90-9ddf-e7c9af183306-1024x576.jpg)