ತಾ|ಸರಕಾರಿ ವಾಹನ ಚಾಲಕರ ಸಂಘದಿಂದ ಚಿಕಿತ್ಸೆಗೆ ಧನಸಹಾಯ

0

ಪುತ್ತೂರು: ಪುತ್ತೂರಿನ ಸಾರಥಿ ಭವನದಲ್ಲಿ ಕಾರ್ಯಾಚರಿಸುತ್ತಿರುವ ತಾಲೂಕು ಸರಕಾರಿ ವಾಹನ ಚಾಲಕರ ಸಂಘದ ನೇತೃತ್ವದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಮಂಗಳೂರಿನಲ್ಲಿ ಕೃಷಿ ಇಲಾಖೆಯಲ್ಲಿ ಚಾಲಕರಾಗಿರುವ ಎಂ.ದೇವದಾಸ್ ರವರಿಗೆ ಚಿಕಿತ್ಸೆ ವೆಚ್ಚವಾಗಿ ರೂ.50 ಸಾವಿರ ನಗದನ್ನು ಅವರ ನಿವಾಸವಾಗಿರುವ ಲಾಲ್ ಬಾಗಿನಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಸರಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ಗಿರಿಧರ್ ಗೌಡ, ಖಜಾಂಚಿ ಎಂ. ಲೀಲಯ್ಯ, ಸಾರಥಿ ಭವನದ ಸ್ಥಾಪಕ ಹಾಗೂ ಸರಕಾರಿ ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಮಾಜಿ ಅಧ್ಯಕ್ಷರುಗಳಾದ ಕಮಾಲಾಕ್ಷ ಹಾಗೂ ಸಿ.ಸೀತಾರಾಮ್ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here