ಮಹಾಲಿಂಗೇಶ್ವರ ಉತ್ಸವದ ದಂಡ್ ಶಿಲಾಲ್ ಪರಿಚಾರಕ ಕೆರೆಮೂಲೆ ನಿವಾಸಿ ಸಂಪತ್ ಪೂಜಾರಿ ನಿಧನ

0

ಪುತ್ತೂರು: ಕೆರೆಮೂಲೆ ನಿವಾಸಿ ಜೆಸಿಬಿ ಮಾಲಕ ಮತ್ತು ಇತಿಹಾಸ ಪ್ರಸಿದ್ದ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಸಂದರ್ಭದಲ್ಲಿ ದಂಡ್ ಶಿಲಾಲ್ ಕಾರ್ಯನಿರ್ವಹಿಸುತ್ತಿದ್ದ ಸಂಪತ್ ಪೂಜಾರಿ (31ವ) ರವರು ಡಿ.6 ರಂದು ಅನಾರೋಗ್ಯದಿಂದಾಗಿ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.


ಅನಾರೋಗ್ಯದಿಂದಾಗಿ ಬಳಲುತ್ತಿದ್ದ ಅವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿಂದ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾದರು. ಮೃತರು ರಾಮಚಂದ್ರ, ತಾಯಿ ವೀಣಾ, ಸಹೋದರ ಶರತ್ ಅವರನ್ನು ಅಗಲಿದ್ದಾರೆ. ಮಹಾಲಿಂಗೇಶ್ವರ ದೇವರ ಉತ್ಸವದಲ್ಲಿ ಪರಿಚಾರಕರಾಗಿದ್ದ ಸಂಪತ್
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಉತ್ಸವ ಸಂದರ್ಭ ದಂಡ್ ಶಿಲಾಲ್ ಹೊರುವ ಕಾರ್ಯದಲ್ಲಿ ಸಂಪತ್ ಮತ್ತು ಶರತ್ ಸಹೋದರರು ಕಾರ್ಯನಿರ್ವಹಿಸುತ್ತಿದ್ದರು. ಬ್ರಹ್ಮರಥ ಕಟ್ಟುವ, ದೇವಸ್ಥಾನದಲ್ಲಿ ಚಪ್ಪರ ಹಾಕುವಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದರು.

LEAVE A REPLY

Please enter your comment!
Please enter your name here