ರಾಮಕುಂಜ: ರಾಮಕುಂಜ ಗ್ರಾಮದ ಕಲ್ಲೇರಿ ನಿವಾಸಿ ಚಂದಪ್ಪ ಕುಲಾಲ್ (52ವ.) ಅವರು ಡಿ.6ರಂದು ಬೆಳಿಗ್ಗೆ ತಮ್ಮ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರು ಕೂಲಿ ಕಾರ್ಮಿಕರಾಗಿದ್ದರು. ಬೆಳಿಗ್ಗೆ ಎದ್ದು ತೋಟಕ್ಕೆ ಹೋದವರು ಎರಡು ಅಡಿಕೆ ಮರಗಳ ಮಧ್ಯೆ ಕಬ್ಬಿಣದ ರಾಡ್ ಕಟ್ಟಿ ಅದಕ್ಕೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತ್ನಿ ಜಯಂತಿ, ಪುತ್ರರಾದ ಸುಕೇಶ್, ಜಿತೇಶ್ ಅವರನ್ನು ಅಗಲಿದ್ದಾರೆ. ರಾಮಕುಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಸದಸ್ಯ ರಾದ ಪ್ರಶಾಂತ್ ಆರ್., ಸೂರಪ್ಪ ಕುಲಾಲ್ ಮತ್ತಿತರರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.
![](https://puttur.suddinews.com/wp-content/uploads/2023/12/54c199c9-5572-4c7f-aea0-c7d011f111e5-1.jpg)