ಪುತ್ತೂರು: ಪಾಂಡಿ ಪರಿವಾರ ಬಂಟರ ತರವಾಡಿನಲ್ಲಿ 5 ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಧರ್ಮದೈವದ ನೇಮೋತ್ಸವ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಪೂರ್ವಭಾವಿ ಸಭೆಯು ಡಿ.5ರಂದು ನಡೆಯಿತು.
![](https://puttur.suddinews.com/wp-content/uploads/2023/12/Untitled-1-2.jpg)
ಧರ್ಮದೈವ ನೇಮೋತ್ಸಕ್ಕೆ ನೂತನ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿ ಅಧ್ಯಕ್ಷರಾಗಿ ಯಶವಂತ್ ನಾೖಕ್ ಬೆಳ್ಳರ್ ಕಜೆ ಪಾಂಡಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪಾಂಡಿ ಪಾಲೆಕೊಚ್ಚಿ ರತನ್ ಕುಮಾರ್, ಕಾರ್ಯದರ್ಶಿಯಾಗಿ ಪಾಂಡಿ ತಲೆಮನೆ ಅಶೋಕ್ ನಾೖಕ್ ಎ ಆರ್, ಕೋಶಾಧಿಕಾರಿಯಾಗಿ ಪಾಂಡಿ ಚಲತ್ ಕಾಲ್ ಪದ್ಮನಾಭ ನಾೖಕ್ ಮತ್ತು ಜೊತೆಕಾರ್ಯದರ್ಶಿಗಳಾಗಿ ಸುರೇಶ್ ನಾೖಕ್, ಚಂದ್ರಶೇಖರ್ ನಾೖಕ್ ಕೆಳಗಿನ ಜಾಲು, ಸುನಿಲ್ ಪಾಂಡಿ ಮತ್ತು ಪ್ರದೀಪ್ ಬೆಳ್ಳೂರು ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಸಮಿತಿಯ ಇತರ ಸದಸ್ಯರನ್ನು ಆಯ್ಕೆಮಾಡಲಾಗಿದ್ದು, ಧರ್ಮದೈವ ನೇಮೋತ್ಸವವು 2024 ಏಪ್ರಿಲ್ 2 ರಿಂದ 4ರವರೆಗೆ ವಿಜ್ರಂಭಣೆಯಿಂದ ಜರಗಲಿದೆ.
![](https://puttur.suddinews.com/wp-content/uploads/2023/12/eab1d48e-1858-484d-a27d-b44995c10109.jpg)
![](https://puttur.suddinews.com/wp-content/uploads/2023/12/0ee7add7-1e54-4ff6-acec-8e16c38ac06b.jpg)
![](https://puttur.suddinews.com/wp-content/uploads/2023/12/475d7b93-669e-467d-bf97-e86c7863f03b.jpg)