ನಿವೃತ್ತ ಬ್ಯಾಂಕ್‌ ಉದ್ಯೋಗಿ ರಮಾನಾಥ ಗೌಡ ಸಂಪ್ಯ ಬೈಲಾಡಿ ವಿಷ ಪದಾರ್ಥ ಸೇವಿಸಿ ಸಾವು

0

ಪುತ್ತೂರು: ಬ್ಯಾಂಕ್‌ ಆಫ್‌ ಬರೋಡಾದ ನಿವೃತ್ತ ಉದ್ಯೋಗಿ ಸಂಪ್ಯ ಬೈಲಾಡಿ ನಿವಾಸಿ ರಮಾನಾಥ ಗೌಡ (62ವ)ರವರು ವಿಷಪದಾರ್ಥ ಸೇವಿಸಿ ಅಸ್ವಸ್ಥಗೊಂಡು ಡಿ.6ರಂದು ಪುತ್ತೂರು ಆಸ್ಪತ್ರೆಯಲ್ಲಿ ನಿಧನರಾದರು.

ರಮಾನಾಥ ಗೌಡ ಅವರು ಬೆಳಗ್ಗಿನ ಜಾವ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಂಜೆ ವೇಳೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ಪರ್ಪುಂಜ ಸರಕಾರಿ ಹಿರಿಯ ಪ್ರಾಥಾಮಿಕ ಶಾಲೆಯ ಮು.ಶಿ ಚಂದ್ರಾವತಿ, ಪುತ್ರಿಯರಾದ ದೀಕ್ಷಾ, ಪ್ರತೀಕ್ಷಾ, ಅಳಿಯ,ಈರ್ವರು ಸಹೋದರರು ಹಾಗೂ ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here