ಕಾವು: ದ.17ರಂದು ಪುತ್ತಿಲ ಪರವಾರದಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ-ಆಮಂತ್ರಣ ಬಿಡುಗಡೆ

0

ಪುತ್ತೂರು: ಪುತ್ತಿಲ ಪರಿವಾರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕಾವು ಇದರ ವತಿಯಿಂದ ದ.17ರಂದು ಕಾವು ನನ್ಯ ಜನಮಂಗಲ ಸಭಾಭವನದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಯಲಿರುವ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆಯ ಆಮಂತ್ರಣ ಪತ್ರಿಕೆ ಬಿಡುಗಡೆಯು ದ.7 ರಂದು ಸಂಜೆ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಶಿವಪ್ರಸಾದ್ ಕಡಮಣ್ಣಾಯರವರು ಕಾರ್ಯಕ್ರಮದ ಯಶಸ್ವಿಗಾಗಿ ಶ್ರೀ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು. ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ತಾಲೂಕು ಸಮಿತಿಯ ಭೀಮಯ್ಯ ಭಟ್, ಮನೀಷ್ ಕುಲಾಲ್, ಪುತ್ತಿಲ ಪರಿವಾರ ಕಾವು ಘಟಕದ ಅಧ್ಯಕ್ಷ ಹರೀಶ್ ಕುಂಜತ್ತಾಯ, ಕಾರ್ಯದರ್ಶಿ ಯೋಗೀಶ್ ಕಾವು, ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ  ಮಹಾಲಿಂಗೇಶ್ವರ ಭಟ್ ಪಳನೀರು, ಕಾರ್ಯಾಧ್ಯಕ್ಷ ಸುನೀಲ್ ಬೋರ್ಕರ್, ಪ್ರಧಾನ ಕಾರ್ಯದರ್ಶಿ ಚಿದಾನಂದ ಆಚಾರ್ಯ ಸಸ್ಪೆಟ್ಟಿ, ಕೋಶಾಧಿಕಾರಿ  ಅನಂತಕೃಷ್ಣ ನಾಯಕ್, ಸಮಿತಿ ಸದಸ್ಯರುಗಳಾದ ರವಿಕಿರಣ ಪಾಟಾಳಿ ಕಾವು, ನಾರಾಯಣಶರ್ಮ‌ ಬರೆಕರೆ, ವಿಜಿತ್ ಕೆರೆಮಾರು, ಶಿವನಾರಾಯಣ ಪಿ.ಜಿ, ರವಿಪ್ರಸಾದ್ ಕಾವು, ನಿರಂಜನ ರಾವ್, ಮಹೇಶ್ವರ ನನ್ಯ, ಕಮಲಾಕ್ಷ ಕಾವು, ಜಯಂತ ಕೆರೆಮಾರು, ಪ್ರಸಾದ್ ಕೆರೆಮಾರು, ಪುನಿತ್ ಕೆರೆಮಾರು, ರವಿ ಕುಲಾಲ್ ಮಾಣಿಯಡ್ಕ, ಮೋನಪ್ಪ ಕುಲಾಲ್, ಪ್ರದೀಪ್ ಆಚಾರಿಮೂಲೆ, ಪ್ರಕಾಶ್ ಮಾಣಿಯಡ್ಕ,  ಸುಧೀಂದ್ರ ಕಾವು, ರಾಜೇಶ್ ಸೀಮುಂಜ, ಶ್ಯಾಂಪ್ರಕಾಶ್ ಟಪ್ಪಾಲುಕಟ್ಟೆ, ಗಣೇಶ್ ಕುಂಟಿಕಾನ, ಐತ್ತಪ್ಪ ಗೌಡ, ಯೋಗೀಶ್ ಸರೋಳ್ತಡಿ,  ಸೇರಿದಂತೆ ಅನೇಕ ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here