ನುಳಿಯಾಲು ಸೀತಾರಾಮ ರೈ ತೋಟದಮೂಲೆ ನಿಧನ

0

ಬೆಟ್ಟಂಪಾಡಿ: ನಿಡ್ಪಳ್ಳಿ ಗ್ರಾಮದ ಪ್ರತಿಷ್ಟಿತ ನುಳಿಯಾಲು ತರವಾಡು ಕುಟುಂಬದ ಹಿರಿಯರಲ್ಲಿ ಓರ್ವರಾದ ನುಳಿಯಾಲು ಸೀತಾರಾಮ ರೈ ‘ಸಂಗಮ್’ ತೋಟದ ಮೂಲೆ (80) ರವರು ಅಲ್ಪಕಾಲದ ಅಸೌಖ್ಯದಿಂದ ಡಿ. 11 ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.

ಮೃತರು ಮಿತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ, ಭಾರತೀಯ ಜನತಾ ಪಕ್ಷದ ಗ್ರಾಮ ಸಮಿತಿ ಅಧ್ಯಕ್ಷರಾಗಿ, ವಿನಾಯಕನಗರ ಶ್ರೀ ಸಿದ್ಧಿವಿನಾಯಕ ಮಂದಿರ ಸ್ಥಾಪಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಪುಷ್ಪಲತಾ ರೈ, ಪುತ್ರಿ ಸರಿತಾ ದೇವಪ್ರಸಾದ್ ಆಳ್ವ, ಪುತ್ರ ಸನತ್ ಕುಮಾರ್ ರೈ,
ಅಳಿಯ ದೇವಪ್ರಸಾದ್ ಆಳ್ವ, ಸೊಸೆ ಅಕ್ಷಯ ರೈ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಇಂದು ಸಂಜೆ ಅಂತ್ಯಕ್ರಿಯೆ:
ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಡಿ.11 ಸಂಜೆ 5 ಗಂಟೆಗೆ ಸ್ವಗೃಹ ತೋಟದಮೂಲೆಯಲ್ಲಿ ನಡೆಯಲಿದೆ ಎಂದು ಅವರ ಮನೆಯವರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here