ಪುತ್ತೂರು ತಾ|ಒಕ್ಕಲಿಗ ಗೌಡ ಸೇವಾ ಸಂಘ – ಅಧ್ಯಕ್ಷ ರವಿ ಮುಂಗ್ಲಿಮನೆ, ಪ್ರ.ಕಾರ್ಯದರ್ಶಿ – ದಯಾನಂದ ಕೆ.ಯಸ್, ಗೌರವಾಧ್ಯಕ್ಷ ಚಿದಾನಂದ ಬೈಲಾಡಿ

0

ಪುತ್ತೂರು: ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ 2024-25ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ಒಕ್ಕಲಿಗ ಗೌಡ ಸಮುದಾಯ ಭವನದ ಸಂಘದ ಕಚೇರಿಯಲ್ಲಿ ನಡೆದು ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿದೆ. ನೂತನ ಅಧ್ಯಕ್ಷರಾಗಿ ರವಿ ಮುಂಗ್ಲಿಮನೆ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ಕೆ.ಯಸ್ ಅವರು ಆಯ್ಕೆಗೊಂಡಿದ್ದಾರೆ.
ಗೌರವಾಧ್ಯಕ್ಷರಾಗಿ ಚಿದಾನಂದ ಬೈಲಾಡಿ, ನಿಕಟಪೂರ್ವ ಅಧ್ಯಕ್ಷರಾಗಿ ವಿಶ್ವನಾಥ ಗೌಡ ಕೆಯ್ಯೂರು, ಉಪಾಧ್ಯಕ್ಷರುಗಳಾಗಿ ಸುಂದರ ಗೌಡ ನಡುಬೈಲು, ಎ.ವಿ.ನಾರಾಯಣ, ಉಪಾಧ್ಯಕ್ಷ ಮತ್ತು ಯುವ ಗೌಡ ಸೇವಾ ಸಂಘದ ಸಲಹೆಗಾರರಾಗಿ ಪುರುಷೋತ್ತಮ ಮುಂಗ್ಲಿಮನೆ, ಉಪಾಧ್ಯಕ್ಷ ಮತ್ತು ಕುಂಬ್ರ ವಲಯ ಉಸ್ತುವಾರಿಯಾಗಿ ಸತೀಶ್ ಪಾಂಬಾರು, ಕಾರ್ಯದರ್ಶಿಗಳಾಗಿ ಡಾ|ಶ್ರೀಧರ್ ಪಾಣತ್ತಿಲ, ಗೌರಿ ಬನ್ನೂರು, ಲಿಂಗಪ್ಪ ಗೌಡ ತೆಂಕಿಲ, ಖಜಾಂಜಿಯಾಗಿ ಶಿವರಾಮ ಮತಾವು, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಶ್ರೀಧರ್ ಗೌಡ ಕಣಜಾಲು, ಮಹಿಳಾ ಸಂಘದ ಸಲಹೆಗಾರರಾಗಿ ಮೀನಾಕ್ಷಿ ಡಿ ಗೌಡ, ವಿದ್ಯಾರ್ಥಿ ಸಂಘದ ಸಲಹೆಗಾರರಾಗಿ ದಾಮೋದರ್ ನಂದಿಲ, ಮಾಧ್ಯಮ ಪ್ರತಿನಿಧಿಯಾಗಿ ಲೋಕೇಶ್ ಬನ್ನೂರು, ಪುತ್ತೂರು ವಲಯ ಉಸ್ತುವಾರಿಯಾಗಿ ಉಮೇಶ್ ಗೌಡ ಪಿಲಿಗುಂಡ, ಉಪ್ಪಿನಂಗಡಿ ವಲಯ ಉಸ್ತುವಾರಿಯಾಗಿ ಸುಧಾಕರ್ ಕಜೆ, ಮುಂಡೂರು ವಲಯ ಉಸ್ತುವಾರಿಯಾಗಿ ವಸಂತ ವೀರಮಂಗಲ, ಈಶ್ವರಮಂಗಲ ವಲಯ ಉಸ್ತುವಾರಿಯಾಗಿ ಲೋಕೇಶ್ ಚಾಕೋಟೆ, ಬನ್ನೂರು ವಲಯ ಉಸ್ತುವಾರಿಯಾಗಿ ವಿಶ್ವನಾಥ ಗೌಡ ಬನ್ನೂರು, ಸದಸ್ಯರಾಗಿ ಕೆ.ಸುರೇಶ್ ಗೌಡ, ವಾರಿಜ ಕೆ, ಉಷಾಮಣಿ ಕೆ, ಗೋವರ್ಧನ್ ಕಲ್ಲೇಗ, ಸೂರಪ್ಪ ಗೌಡ, ರಾಧಾಕೃಷ್ಣ ನಂದಿಲ, ಯು.ನಾರಾಯಣ ಗೌಡ, ಗಣೇಶ್ ನೈತಾಡಿ, ಎ.ಗಿರಿಧರ್ ಅಮೆಮನೆ, ಚೆನ್ನಪ್ಪ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ.

ಡಿ.24ರಂದು ಪದಪ್ರದಾನ

ಒಕ್ಕಲಿಗ ಗೌಡ ಸೇವಾ ಸಂಘ, ಯುವ ಸಂಘ, ಮಹಿಳಾ ಗೌಡ ಸೇವಾ ಸಂಘದ ನೂತನ ಪದಾಽಕಾರಿಗಳ ಪದಪ್ರದಾನ ಕಾರ್ಯಕ್ರಮ ಡಿ.24ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯುವ ವಾರ್ಷಿಕ ಕಾರ್ಯಕ್ರಮ ಶ್ರೀ ಸತ್ಯನಾರಾಯಣ ಪೂಜೆಯ ಸಂದರ್ಭ ನಡೆಯಲಿದೆ ಎಂದು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here