ಉಪ್ಪಿನಂಗಡಿ ಮತ್ತು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಸನ್ಮಾನ

0

ಪುತ್ತೂರು ಮತ್ತು ಕಡಬ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ 20 ಅಂಶಗಳ ಸಭೆಯಲ್ಲಿ ಉಪ್ಪಿನಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸಿಇಓ ಕ್ಲೇರಿ ವೇಗಸ್ ಮತ್ತು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ ಸುಮಾರು 32 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸಿಇಓ ಪದ್ಮಪ್ಪ ಗೌಡ ರವರಿಗೆ ಸನ್ಮಾನ ಕಾರ್ಯಕ್ರಮ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್ ವಹಿಸಿ, ನಿವೃತ್ತರಾದ ಸಿಇಓಗಳಾದ ಕ್ಲೇರಿ ವೇಗಸ್ ಮತ್ತು ಪದ್ಮಪ್ಪ ಗೌಡ ಅವರನ್ನು ಶಾಲು ಹೊದಿಸಿ ಫಲಪುಷ್ಪಗಳೊಂದಿಗೆ ಸ್ಮರಣಿಕೆ ನೀಡಿ ಗೌರವಿಸಿ ನಿವೃತ್ತರ ಕಾರ್ಯವೈಖರಿಯನ್ನು ಅಭಿನಂದಿಸಿ 2 ಸಿಇಓ ಗಳ ಸೇವೆಯಿಂದ ಆ ಸಹಕಾರ ಸಂಸ್ಥೆಗಳು ಅತ್ಯುತ್ತಮವಾಗಿ ಅಭಿವೃಧ್ದಿ ಹೊಂದಿದ ಬಗ್ಗೆ ಹರ್ಷ ವ್ಯಕ್ತಪಡಿಸಿ ಶುಭಹಾರೈಸಿದರು. ಮುಖ್ಯ ಅತಿಥಿಯಾದ ಪುತ್ತೂರು ಶಾಖೆಯ ವ್ಯವಸ್ಥಾಪಕ ಹರೀಶ್ ರೈ ನಿವೃತ್ತರಾದ ಸಿಇಓ ಕ್ಲೇರಿ ವೇಗಸ್ ಮತ್ತು ಪದ್ಮಪ್ಪ ಗೌಡ ರವರಿಗೆ ಶುಭಹಾರೈಸಿ ನೂತನ ಸಿಇಓ ಗಳಿಗೆ ಅಭಿನಂದಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರುಗಳಾದ ಶಶಿಕುಮಾರ್ ರೈ ಮತ್ತು ಎಸ್.ಬಿ ಜಯರಾಮ ರೈ ಯವರು ನಿವೃತ್ತರಿಗೆ ಕಳುಹಿಸಿದ ಶುಭಹಾರೈಕೆಯನ್ನು ಸಭೆಯಲ್ಲಿ ತಿಳಿಸಲಾಯಿತು.

ಸನ್ಮಾನಿತರು ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರನ್ನು ಸ್ಮರಿಸಿಕೊಂಡು ಕೃತಜ್ಞತೆ ಸಲ್ಲಿಸಿದರು. ಉಪ್ಪಿನಂಗಡಿ ಸಹಕಾರ ಸಂಘದ ನೂತನ ಸಿಇಓ ಶೋಭಾ ಮತ್ತು ಆಲಂಕಾರು ಸಹಕಾರ ಸಂಘದ ನೂತನ ಸಿಇಓ ಮನೋಹರ್ ರವರನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕ ತ್ರಿವೇಣಿ ರಾವ್ ಹೂಗುಚ್ಚ ನೀಡಿ ಗೌರವಿಸಿದರು. ಚಾರ್ವಾಕದ ಸಿಇಓ ಅಶೋಕ್ ಗೌಡ ಮತ್ತು ಮುಂಡೂರು ಸಹಕಾರಿ ಸಂಘದ ಸಿಇಓ ಜಯಪ್ರಕಾಶ್ ರೈ ಸನ್ಮಾನಿತರಿಗೆ ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದರು.

 ಈ ಸಮಾರಂಭದಲ್ಲಿ ವಲಯ ಮೇಲ್ವಿಚಾರಕರಾದ ವಸಂತ ಎಸ್. ಶರತ್, ಪ್ರದೀಪ್, ಮನೋಜ್ ಹಾಗೂ ಪುತ್ತೂರು ಮತ್ತು ಕಡಬ ತಾಲೂಕಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ, ಇರ್ದೆ-ಬೆಟ್ಟಂಪಾಡಿ ಸಹಕಾರ ಸಂಘದ ರಾಮಯ್ಯ ರೈ ,ನೆಲ್ಯಾಡಿಯ ದಯಾಕರ್ ರೈ, ಕಾವು ಸಂಘದ ಕೇಶವ ಮೂರ್ತಿ, ಕೊಳ್ತಿಗೆಯ ಹಂಸಾವತಿ, ಬಲ್ನಾಡಿನ ಸೀತಾರಾಮ ಗೌಡ, ಆರ್ಯಾಪು ಜಯಂತಿ,  ಪಾಣಾಜೆಯ ಹರೀಶ್ ಭಟ್, ಕುಂಬ್ರದ  ಭವಾನಿ ಬಿ.ಆರ್, ಬನ್ನೂರಿನ ರಾಧ ರೈ , ಹೊಸಮಠದ ಸೋಮಸುಂದರ್ ಶೆಟ್ಟಿ, ಕೆದಂಬಾಡಿಯ ವಿನಯ ರೈ , ಬಿಳಿನೆಲೆಯ ಪುನೀತ್, ಕಡಬದ ಬಾಲಕೃಷ್ಣ , ಎಡಮಂಗಲದ ರಮೇಶ್ ಬಿ , ಏನೆಕಲ್ಲಿನ ರತನ್, ಸುಬ್ರಹ್ಮಣ್ಯದ ಪ್ರಕಾಶ್ ಉಪಸ್ಥಿತರಿದ್ದರು.
ಸವಣೂರು ಸಹಕಾರ ಸಂಘದ ಸಿಇಓ ಚಂದ್ರಶೇಖರ್ ಪಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ನರಿಮೊಗ್ರು ಸಹಕಾರ ಸಂಘದ ಸಿಇಓ ಮಧುಕರ್ ಅವರು ವಂದಿಸಿದರು.

LEAVE A REPLY

Please enter your comment!
Please enter your name here