ಪುಣ್ಚತ್ತಾರಿನಲ್ಲಿ ಶ್ರೀ ಭಗವತಿ ಹೋಟೆಲ್ ಶುಭಾರಂಭ

0

ಕಾಣಿಯೂರು: ಪುಣ್ಚತ್ತಾರಿನ ಇಡ್ಯಡ್ಕ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಸಸ್ಯಹಾರಿ ಮತ್ತು ಮಾಂಸಾಹಾರಿ ಹೋಟೆಲ್ ಶ್ರೀ ಭಗವತಿ ಡಿ.14ರಂದು ಶುಭಾರಂಭಗೊಂಡಿದೆ. ವೆಂಕಟ್ರಮಣ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಪಿ.ಸಿ ಜಯರಾಮರವರು ಉದ್ಘಾಟಸಿ ಶುಭಹಾರೈಸಿದರು. ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪ್ರವೀಣ್ ಕುಂಟ್ಯಾನ, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ರಾಮಣ್ಣ ಗೌಡ ಮೂಡೈಮಜಲು, ಇಡ್ಯಡ್ಕ ಕಾಂಪ್ಲೆಕ್ಸ್ ಮಾಲಕರಾದ ನಾರಾಯಣ ಗೌಡ ಪುಣ್ಚತ್ತಾರು, ಚಾರ್ವಾಕ ಶಾಲಾ ಮುಖ್ಯಗುರು ಪಾರ್ವತಿ, ಪ್ರಖ್ಯಾತ್ ಪುಣ್ಚತ್ತಾರು ಸೇರಿದಂತೆ ಹಲವಾರು ಮಂದಿ ಆಗಮಿಸಿ ಶುಭಹಾರೈಸಿದರು. ಹೋಟೆಲ್ ಮಾಲಕರಾದ ಆನಂದ ಗೌಡ ಅಂಬುಲ, ರೋಹಿತ್, ಪ್ರೀತಮ್ ಅತಿಥಿಗಳನ್ನು ಸ್ವಾಗತಿಸಿದರು.


ಪುಣ್ಚತ್ತಾರಿನಲ್ಲಿ ನೂತನವಾಗಿ ಶುಭಾರಂಭಗೊಂಡಿರುವ ನಮ್ಮಲ್ಲಿ ಶುಭ ಸಮಾರಂಭಗಳಿಗೆ ಬೇಕಾದ ಕ್ಯಾಟರಿಂಗ್ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು ಎಂದು ಹೋಟೆಲ್ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here