ನಗರಸಭೆ ಎರಡು ವಾರ್ಡ್‌ಗಳ ಉಪಚುನಾವಣೆ-ಕಾಂಗ್ರೆಸ್‌ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

0

ಪುತ್ತೂರು:ಡಿ.27ರಂದು ನಡೆಯುವ ಪುತ್ತೂರು ನಗರಸಭೆ ಎರಡು ವಾರ್ಡ್‌ಗಳ ಉಪಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್‌ನಿಂದ ನಗರಸಭೆ ವಾರ್ಡ್ ಸಂಖ್ಯೆ 1ಕ್ಕೆ ದಿನೇಶ್ ಕೆ. ಶೇವಿರೆ ಮತ್ತು ವಾರ್ಡ್ ಸಂಖ್ಯೆ 11ರಲ್ಲಿ ದಾಮೋದರ್ ಭಂಡಾರ್ಕರ್ ಅವರನ್ನು ಕಣಕ್ಕಿಳಿಸಿದ್ದು ಅವರು ಇಂದು ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವ ಮುಂಚಿತವಾಗಿ ಮಹಾಲಿಂಗೇಶ್ವರ ದೇವಸ್ಥಾನ, ವೆಂಕಟರಮಣ ದೇವಸ್ಥಾನದಲ್ಲಿ ಪ್ರಾರ್ಥಿಸಿ , ಪುತ್ತೂರಿನ ಕೇಂದ್ರ ಮಸೀದಿ ಹಾಗೂ ಚರ್ಚ್ ನಲ್ಲಿ ಪ್ರಾರ್ಥಿಸಿ ನಂತರ ನಗರಸಭೆಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್‍ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ನಗರ ಕಾಂಗ್ರೇಸ್‍ನ ಅಧ್ಯಕ್ಷ ಮಹಮ್ಮದ್ ಆಲಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ನ ಅಧ್ಯಕ್ಷ ಡಾ.ರಾಜರಾಮ ಭಟ್, ರಾಜ್ಯ ವಕ್ತಾರ ಅಮಲ ರಾಮಚಂದ್ರ ಭಟ್ , ಪಂಜಿಗುಡ್ಡೆ ಈಶ್ವರ ಭಟ್ , ಯುವ ಕಾಂಗ್ರೇಸ್‍ನ ಜಿಲ್ಲಾ ಮುಖಂಡ ರಂಜಿತ್ ಬಂಗೇರ ಸಹಿತ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here