ಬೊಳುವಾರು ನಿವಾಸಿ ಕೊಡಿಪ್ಪಾಡಿ ಶ್ರೀಪತಿ ಯರ್ಕಾಡಿತ್ತಾಯ ನಿಧನ

0

ಪುತ್ತೂರು: ಬೊಳುವಾರು ನಿವಾಸಿ ಕೊಡಿಪ್ಪಾಡಿ ಶ್ರೀಪತಿ ಯರ್ಕಾಡಿತ್ತಾಯ(71ವ)ರವರು ಡಿ.17ರಂದು ನಸುಕಿನ ಜಾವ ನಿಧನರಾದರು.
ಮೂಲತಃ ಕೊಡಿಪ್ಪಾಡಿಯವರಾಗಿದ್ದು ಬೊಳುವಾರಿನಲ್ಲಿ ವಾಸ್ತವ್ಯ ಇರುವ ಶ್ರೀಪತಿ ಯರ್ಕಾಡಿತ್ತಾಯ ಅವರು ಡಿ.16ರಂದು ರಾತ್ರಿ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮನೆಗೆ ಬಂದವರು ನಸುಕಿನ ಜಾವ ಮೃತಪಟ್ಟಿದ್ದಾರೆ. ಮೃತರು ಪತ್ನಿ ಸುಧಾ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಬಿಜೆಪಿಯಲ್ಲಿ ಸಕ್ರೀಯರಾಗಿದ್ದ ಶ್ರೀಪತಿ ಯರ್ಕಾಡಿತ್ತಾಯ ಅವರು ಬೊಳುವಾರು ವೈದೇಹಿ ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ಟಿ ಪ್ರೇಮಲತಾ ರಾವ್ ಅವರ ಸಹೋದರಿಯ ಗಂಡ ಆಗಿದ್ದಾರೆ.

LEAVE A REPLY

Please enter your comment!
Please enter your name here