ದ.22ರಂದು ಚಂದನದಲ್ಲಿ ವಸಂತಲಕ್ಷ್ಮಿ ಸಂದರ್ಶನ ಪ್ರಸಾರ

0

ಪುತ್ತೂರು: ದೂರದರ್ಶನ ಚಂದನ ವಾಹಿನಿಯಲ್ಲಿ ರಂಗ ಕಲಾವಿದೆ, ಸೌಂದರ್ಯತಜ್ಞೆ, ಕವಯಿತ್ರಿ, ಪರಿಸರಪ್ರೇಮಿ ವಸಂತಲಕ್ಷ್ಮಿ ಪುತ್ತೂರು ಅವರ ಸಂದರ್ಶನ ಡಿ. 22ರಂದು ಬೆಳಿಗ್ಗೆ 8 ಗಂಟೆಗೆ ನೇರಪ್ರಸಾರವಾಗಲಿದೆ.


ಚಂದನ ವಾಹಿನಿಯ ಶುಭೋದಯ ಕರ್ನಾಟಕ ಕಾರ್ಯಕ್ರಮದಲ್ಲಿ ಅವರ‌ ಸಂದರ್ಶನ ಒಂದು ಗಂಟೆಯವರೆಗೆ ಪ್ರಸಾರವಾಗಲಿದ್ದು ಅದೇ ದಿನ ಮಧ್ಯಾಹ್ನ 3 ಗಂಟೆಗೆ ಮರುಪ್ರಸಾರವಾಗಲಿದೆ. ಮುಕ್ರಂಪಾಡಿ ನಿವಾಸಿ, ನ್ಯಾಯವಾದಿ ಶಶಿಧರ ಬಿ.ಎನ್. ಅವರ ಪತ್ನಿಯಾಗಿರುವ ವಸಂತಲಕ್ಷ್ಮಿ ಅವರು ಆಳ್ವಾಸ್ ಸಂಸ್ಥೆ ಪ್ರಸ್ತುತಪಡಿಸುವ ಜೀವನ್ ರಾಂ ಸುಳ್ಯ ನಿರ್ದೇಶನದ ‘ಚಾರುವಸಂತ’ ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here