ಮುರುವ ಸರಕಾರಿ ಪ್ರೌಢ ಶಾಲೆ ರಸ್ತೆಗೆ ಶಿಲಾನ್ಯಾಸ – ಹಲವು ವರ್ಷದ ಬೇಡಿಕೆ ಈಡೇರಿದೆ: ಶ್ರೀಧರ್ ಬಾಳೆಕಲ್ಲು

0

ಪುತ್ತೂರು: ಮಾಣಿಲ ಗ್ರಾಮದ ಮುರುವ ಸರಕಾರಿ ಪ್ರೌಢ ಶಾಲೆಗೆ ತೆರಳುವ ರಸ್ತೆಗೆ ಕಾಂಕ್ರಿಟೀಕರಣಕ್ಕೆ ಶಾಸಕ ಅಶೋಕ್ ರೈ ಗುದ್ದಲಿಪೂಜೆ ನಡೆಸಿದರು. ಈ ವೇಳೆ ಮಾತನಾಡಿದ ಮಾಣಿಲ ಗ್ರಾಪಂ ಅಧ್ಯಕ್ಷ ಶ್ರೀಧರ್ ಬಾಳೆಕಲ್ಲು ಮಾತನಾಡಿ ಹಲವು ವರ್ಷಗಳ ಬೇಎಇಕೆ ಈ ಬಾರಿ ಈಡೇರಿದೆ. ವಿದ್ಯಾರ್ಥಿಗಳುಮತ್ತು ಸಾರ್ವಜನಿಕರ ಅನುಕೂಲಕ್ಕೆ ಈ ರಸ್ತೆ ಬಳಕೆಯಾಗಲಿದೆ ಎಂದು ಹೇಳಿದರು. ಶಾಸಕ ಅಶೋಕ್ ರೈ ಮಾತನಾಡಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಈ ವೇಳೆ ಶಾಲೆಯ ಸ್ಥಳ ದಾನಿ ಮುರುವ ಮಹಾಬಲೆಭಟ್ ,ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ಶಿವಪ್ರಸಧ್ ಸರಂಪಳ್ಳ, ಜಗನ್ನಾಥ ಶೆಟ್ಟಿ,ಗ್ರಾಪಂ ಸದಸ್ಯವಿಷ್ಣು ಕೊಮ್ಮಂಜೆ , ಮಾಣಿಲ ಮಾಜಿ ಗ್ರಾಪಂ ಅಧ್ಯಕ್ಷೆ ವನಿತಾ, ಗ್ರಾಪಂ ಸದಸ್ಯೆ ಮಾಲತಿ, ಶಾಲಾ ಮುಖ್ಯ ಶಿಕ್ಷಕಿ‌ ಲತಾ, ಜಯರಾಂ ಬಳ್ಳಾಲ್, ಶಿಕ್ಷಕರು ಕವಿತಾ, ಉಮಾನಾಥ ರೈ, ಮಮತಾ ,ಸುದೇಶ್, ಸೀತಾ ಲಕ್ಷ್ಮಿ, ಮೊಯಿದು ಕುಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here