ಇಚ್ಲಂಪಾಡಿ ಭಾಸ್ಕರ ಗೌಡರವರಿಂದ ಕಡಬ ಒಕ್ಕಲಿಗ ಸಮುದಾಯ ಭವನ ಯೋಜನೆಗೆ 1ಲಕ್ಷ ರೂ.ದೇಣಿಗೆ

0

ನೆಲ್ಯಾಡಿ: ಕಡಬ ಹೊಸಮಠದಲ್ಲಿ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಸುಮಾರು 15 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಒಕ್ಕಲಿಗ ಸಮುದಾಯ ಭವನ ಯೋಜನೆಗೆ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ, ಇಚ್ಲಂಪಾಡಿ ಗ್ರಾಮದ ಒಡ್ಯತ್ತಡ್ಕ ನಿವಾಸಿ ಭಾಸ್ಕರ ಎಸ್.ಗೌಡ, ರೇಖಾ ಬಿ., ವಂದನ್ ಹಾಗೂ ನಂದನ್ ಗೌಡರವರು 1,00,101 ರೂ.ದೇಣಿಗೆ ನೀಡಿದರು. ದೇಣಿಗೆ ಮೊತ್ತವನ್ನು ಅವರು ಹೊಸಮಠದಲ್ಲಿ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರ ಮೂಲಕ ಸಂಘದ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಕಡಬ ತಾಲೂಕು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಸುರೇಶ್ ಬೈಲು, ಕೋಶಾಧಿಕಾರಿ ಶಿವಪ್ರಸಾದ್ ಪುತ್ತಿಲ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇಚ್ಲಂಪಾಡಿ ಒಡ್ಯತ್ತಡ್ಕ ಮನೆಯ ರೇಖಾ ಬಿ ಮತ್ತು ಭಾಸ್ಕರ ಎಸ್ .ಗೌಡ ಹಾಗೂ ಮಕ್ಕಳಾದ ಬಿ ವಂದನ್ ಗೌಡ, ಬಿ ನಂದನ್ ಗೌಡ ಇವರು ನಮ್ಮ ಮಹತ್ವಕಾಂಕ್ಷಿ ಒಕ್ಕಲಿಗ ಗೌಡ ಸೇವಾ ಸಂಘ ಕಡಬ ತಾಲೂಕು ಇದರ ಸಮುದಾಯ ಭವನ ಯೋಜನೆಗೆ 1,00,101 ರೂಪಾಯಿಯನ್ನು ಉದಾರವಾಗಿ ನೀಡಿ ಸಂಘದ ಸ್ಥಾಪಕ ಸದಸ್ಯರಾಗಿ ನಮ್ಮ ಸಮುದಾಯದ ಆಸ್ತಿಯಾಗಿದ್ದಾರೆ. ನಮ್ಮ ಸಮಾಜದ ಮೇಲೆ ನೀವು ಇಟ್ಟ ಅಭಿಮಾನಕ್ಕೆ ಮತ್ತು ನಮ್ಮ ಮೇಲಿನ ನಂಬಿಕೆಗೆ ನಿಮಗೆ ನಮ್ಮ ಧನ್ಯವಾದಗಳು. ಒಕ್ಕಲಿಗ ಸಮಾಜದ ಗೌರವವನ್ನು ಮತ್ತಷ್ಟು ಎತ್ತರಕ್ಕೆರಿಸುವ ರೀತಿಯಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕವಾಗಿ ನಿಮ್ಮಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತೇವೆ.
-ಸುರೇಶ್ ಬೈಲು, ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಒಕ್ಕಲಿಗ ಗೌಡ ಸೇವಾ ಸಂಘ ಕಡಬ ತಾಲೂಕು

LEAVE A REPLY

Please enter your comment!
Please enter your name here