ಕಾರ್ಪಾಡಿ ದೇವಸ್ಥಾನ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

0

ಹಂತ ಹಂತವಾಗಿ ಕ್ಷೇತ್ರದ ಸಂಪೂರ್ಣ ಅಭಿವೃದ್ದಿ; ಅಶೋಕ್ ರೈ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಹಂತ ಹಂತವಾಗಿ ಸಂಪೂರ್ಣ ಅಭಿವೃದ್ದಿ ಕಾರ್ಯಗಳು ನಡೆಯಲಿದ್ದು ಎಂದೂ ತಾರತಮ್ಯ ಮಾಡುವುದಿಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಆರ್ಯಾಪು ಗ್ರಾಮದ ಕಾರ್ಪಾಡಿ‌ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳುವ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.ಈ ಅಭಿವೃದ್ಧಿಗೆ ರೂ 15 ಲಕ್ಷ ಅನುದಾನ‌ ಮಂಜೂರಾಗಿದ್ದು ಇಲ್ಲಿನ ಜನರ ಬಹುವರ್ಷದ ಬೇಡಿಕೆಯಾಗಿದೆ. ಮುಂದೆ ಈ ಭಾಗದ ಅನೇಕ ರಸ್ತೆಗಳ ಬೇಡಿಕೆ ಇದೆ ಅವುಗಳಿಗೆ ಅನುದಾನ ನೀಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಲಯಾಧ್ಯಕ್ಷ ಪ್ರಜ್ವಲ್ ರೈ ತೊಟ್ಲ, ಡಿಸಿಸಿ ಸದಸ್ಯ ಅಶೋಕ್ ಸಂಪ್ಯ, ಗ್ರಾಪಂ ಸದಸ್ಯರಾದ ಪವಿತ್ರ ರೈ, ಪೂರ್ಣಿಮಾ ರೈ, ಖಾದರ್ ಕಲ್ಲರ್ಪೆ, ಆದಂ ಕಲ್ಲರ್ಪೆ, ಶಿವಪ್ರಸಾದ್ ನಾಯಕ್ ಹಾರಿಸ್ ಸಂಟ್ಯಾರ್ ,ದಾಮೋದರ್ ಮಣಿಯಾಣಿ, ಉದಯ ರೈ ಮೇರ್ಲ, ಕೇಶವ ಸುವರ್ಣ ಮೇರ್ಲ, ಮಹೇಸ್ ರೈ ಮಲಾರ್, ಸಲಾಂ ಸಂಪ್ಯ, ಬಾಲಕೃಷ್ಣ ಗೌಡ ಕಾಣಿಕೆ, ಗುತ್ತಿಗೆದಾರ ಬಿ ಕೆ ಬಶೀರ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here