ನಿಶ್ಚಯ ಕುಮಾರ ಉದಯ ಕುಮಾರ ಹೆಗಡೆಗೆ ಪಿಎಚ್. ಡಿ

0

ಪುತ್ತೂರು: ಇಲ್ಲಿನ ಚಿಕ್ಕಮುಡ್ನೂರು ದಾರಂದಕುಕ್ಕು ನಿವಾಸಿ ನಿಶ್ಚಯ ಕುಮಾರ ಉದಯ‌ ಕುಮಾರ‌ ಹೆಗಡೆಯವರು ಮಂಡಿಸಿರುವ ಮಹಾಪ್ರಬಂಧಕ್ಕೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಡಾ.ಲಿಂಗನಗೌಡ‌ ಕುಲಕರ್ಣಿ, ನಿವೃತ್ತ ಪ್ರಾಧ್ಯಾಪಕರು, ಕೆ.ಎಲ್.ಇ, ವಿಶ್ವವಿದ್ಯಾಲಯ ಹುಬ್ಬಳ್ಳಿ, ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಕ್ರಿಪ್ಟೋಗ್ರಾಫಿಕ್ ಸ್ಕೀಮ್ಸ್ ಫಾರ್ ಡಾಟಾ ಸರ್ವೈವೆಬಿಲಿಟಿ ಇನ್ ಅನ್‌ಅಟೆಂಡೆಡ್ ವಯರ್ಲೆಸ್ ಸೆನ್ಸರ್ ನೆಟ್ವರ್ಕ್ಸ್’ ಮಹಾಪ್ರಬಂಧಕ್ಕೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು‌ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಉತ್ತರ ಕನ್ನಡ ಜಿಲ್ಲೆಯ‌ ಮುಂಡಗೋಡು ತಾಲ್ಲೂಕು ನಿವಾಸಿ ವಿಜಯಾ ಮತ್ತು ಉದಯಕುಮಾರ ಹೆಗಡೆ‌ ಪುತ್ರರಾದ ಇವರು ಪ್ರಸ್ತುತ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಗಣಕಯಂತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here