ಚುನಾವಣಾ ರಾಜಕೀಯದಿಂದ ನಿವೃತ್ತಿ – ಕಡಬ ಒಕ್ಕಲಿಗ ಸಮುದಾಯ ಭವನ ಶಿಲಾನ್ಯಾಸ ಸಮಾರಂಭದಲ್ಲಿ ಡಿ.ವಿ.ಸದಾನಂದ ಗೌಡ

0

ಕಡಬ: ಸುಳ್ಯದ ಪುಣ್ಯ ಭೂಮಿಯಿಂದ ರಾಜಕೀಯಕ್ಕೆ ‌ಸೇರಿದ್ದ ನನಗೆ ಪಕ್ಷ ಎಲ್ಲವನ್ನೂ ನೀಡಿದೆ. ಯುವಕರಿಗೆ ಹಾಗೂ ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಯಾಗುತ್ತಿದ್ದಾನೆ. ಮುಂದೆ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಕಡಬದಲ್ಲಿ ಡಿ.26ರಂದು ಬೆಳಿಗ್ಗೆ ನಡೆದ ಒಕ್ಕಲಿಗ ಸಮುದಾಯ ಭವನ ಶಿಲಾನ್ಯಾಸ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಹೇಳಿದರು.
ಜನ ಸೇವೆಗೆ ಸಾಕಷ್ಟು ಅನುಭವ ಸಿಕ್ಕಿದೆ. ಪ್ರಚಾರಕ್ಕೆ ಅಂಟಿಕೊಂಡಿಲ್ಲ, ಗುಂಪು ಗಾರಿಕೆ ಮಾಡಿಲ್ಲ ಎಂದು ಡಿ.ವಿ.ಸದಾನಂದ ಗೌಡ ಹೇಳಿದರು. ದ.ಕ.ಜಿಲ್ಲೆಯಲ್ಲಿ ಜನಸಂಖ್ಯೆಯಲ್ಲಿ ಒಕ್ಕಲಿಗ ಸಮುದಾಯ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಬೇಕು ಎಂದು ಡಿ ವಿ ಹೇಳಿದರು.

LEAVE A REPLY

Please enter your comment!
Please enter your name here