ಸವಣೂರು ಹಾ.ಉ.ಸ.ಸಂಘದ ಅಧ್ಯಕ್ಷರಾಗಿ ಕೃಷ್ಣ ಭಟ್, ಉಪಾಧ್ಯಕ್ಷೆ ಆಶಾ ರೈ ಆಯ್ಕೆ

0

ಪುತ್ತೂರು: ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರುಷಗಳ ಅವಧಿಗೆ ಅಧ್ಯಕ್ಷರಾಗಿ ಕೃಷ್ಣ ಭಟ್ ಕುಕ್ಕುಜೆ ಹಾಗೂ ಉಪಾಧ್ಯಕ್ಷರಾಗಿ ಆಶಾ ರೈ ಕಲಾಯಿರವರು ಅವಿರೋಧವಾಗಿ ಆಯ್ಕೆಯಾದರು. ಡಿ.26 ರಂದು ಸಂಘದ ಕಚೇರಿಯಲ್ಲಿ ಈ ಆಯ್ಕೆ ನಡೆಯಿತು.

ಚುನಾವಣಾಧಿಕಾರಿ ಶೋಭಾ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು ನಿರ್ದೇಶಕರುಗಳಾದ ಜಯರಾಮ ರೈ ಸೊಂಪಾಡಿ, ಪ್ರೇಮಚಂದ್ರ ಮೆದು, ಪ್ರಶಾಂತ್ ಕುಮಾರ್, ಮಮತಾ ಕೆ.ಬಿ ದೇವಸ್ಯ, ಗೋಪಾಲಕೃಷ್ಣ ಗೌಡ, ಪದ್ಮಯ್ಯ ಗೌಡ ಪರಣೆ, ಗಂಗಾಧರ ಸುಣ್ಣಾಜೆ, ಆಶಾಲತಾ, ಗೀತಾ, ಸೂರಪ್ಪ ಗೌಡರವರು ಉಪಸ್ಥಿತರಿದ್ದರು . ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಹರೀಶ್ ಸಹಕರಿಸಿದರು. ನೂತನವಾಗಿ ಆಯ್ಕೆಗೊಂಡ ಅಧ್ಯಕ ಹಾಗೂ ಉಪಾಧ್ಯಕ್ಷೆ ಹಾಗೂ ನಿರ್ದೇಶಕರುಗಳು ಸಹಕಾರ ಭಾರತಿ ಬೆಂಬಲಿತರಾಗಿರುತ್ತಾರೆ. ನೂತನ ತಂಡಕ್ಕೆ ಬಿಜೆಪಿ ಮುಖಂಡರುಗಳಾದ ಗಿರಿಶಂಕರ ಸುಲಾಯ, ಸುಪ್ರೀತ್ ರೈ ಖಂಡಗ ಶುಭಹಾರೈಸಿದರು.

LEAVE A REPLY

Please enter your comment!
Please enter your name here