ವಿಟ್ಲ ಗಿರಿನಿವಾಸ ನರ್ಸರಿಯ ಚಂದ್ರಶೇಖರ್ ಕೆ ಜಿ ಅವರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕೃಷಿ ಇಲಾಖೆಯು ಆತ್ಮ ಯೋಜನೆಯಡಿ ಕೊಡಮಾಡುವ 2022-23ನೇ ಸಾಲಿನ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ವಿಟ್ಲ ಗಿರಿ ನಿವಾಸ ನರ್ಸರಿಯ ಮಾಲಕ, ಬಂಟ್ವಾಳ ತಾಲೂಕು ವಿಟ್ಲಮುಡ್ನೂರು ಗ್ರಾಮದ ಚಂದ್ರಶೇಖರ್ ಕೆ.ಜಿ ಪಡೆದುಕೊಂಡಿದ್ದಾರೆ. ಆತ್ಮ ಯೋಜನೆಯಡಿ ಬೆಳೆ ವೈವಿಧ್ಯೀಕರಣ ಹಾಗೂ ನರ್ಸರಿ ವಿಭಾಗದಲ್ಲಿ ಕೃಷಿ ಇಲಾಖೆಯು ಈ ಪ್ರಶಸ್ತಿಯನ್ನು ನೀಡಿದ್ದು, ಡಿ.23ರಂದು ಬಂಟ್ವಾಳ ಕೃಷಿ ಇಲಾಖೆ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಜಂಟಿಯಾಗಿ ಈ ಪ್ರಶಸ್ತಿ ಪ್ರದಾನ ಮಾಡಿದೆ.

LEAVE A REPLY

Please enter your comment!
Please enter your name here