ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ನಿಂದ ಅನಾರೋಗ್ಯ ಪೀಡಿತ ಕೃಷ್ಣ ನಾಯ್ಕ ಅವರಿಗೆ ನೆರವು

0

ಕಡಬ: ಅನಾರೋಗ್ಯ ಪೀಡಿತರಾಗಿರುವ ಬಲ್ಯ ಗ್ರಾಮದ ಕುದ್ರಡ್ಕ ನಿವಾಸಿ, ಕುಟುಂಬದ ಮುಖ್ಯಸ್ಥರೂ ಆದ ಕೃಷ್ಣ ನಾಯ್ಕ್ ಅವರಿಗೆ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು. ಕೃಷ್ಣ ನಾಯ್ಕ ಅವರ ಪುತ್ರಿಯೂ ವಿಶೇಷ ಚೇತನರಾಗಿದ್ದಾರೆ. ಬೇರೆ ಯಾರೂ ಇವರ ಆರೈಕೆಗೆ ಇಲ್ಲದೇ ಈ ಬಡ ಕುಟುಂಬ ಕಷ್ಟದಲ್ಲಿರುತ್ತದೆ. ಇವರ ಈ ಪರಿಸ್ಥಿತಿ ಹಿನ್ನೆಲೆಯಲ್ಲಿ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮನಾ ಹಾಗೂ ಪಿಡಿಒ ಆನಂದ ಅವರು ಮನೆಗೆ ತೆರಳಿ ಆರೋಗ್ಯ ವಿಚಾರಿಸಿ ವೈದ್ಯಕೀಯ ಚಿಕಿತ್ಸೆಗೆ ಗ್ರಾಮ ಪಂಚಾಯತ್ ನ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಅನುದಾನದಲ್ಲಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರ ಮಾಡಿದರು.

LEAVE A REPLY

Please enter your comment!
Please enter your name here