ಉಪ್ಪಿನಂಗಡಿ:ವಿಪರೀತ ಮದ್ಯ ಸೇವನೆ- ಸಾವು

0

ಉಪ್ಪಿನಂಗಡಿ: ಹೆದ್ದಾರಿ ಕಾಮಗಾರಿಗೆಂದು ಬಿಹಾರದಿಂದ ಬಂದಿದ್ದ ಕಾರ್ಮಿಕನೋರ್ವ ವಿಪರೀತ ಮದ್ಯ ಸೇವಿಸಿ ಮಲಗಿದ್ದಲ್ಲೇ ಸಾವನ್ನಪ್ಪಿದ ಘಟನೆ ಶಿರಾಡಿ ಗ್ರಾಮದ ಉದನೆ ಎಂಬಲ್ಲಿ ಶನಿವಾರ ಸಂಭವಿಸಿದೆ.


ಬಿಹಾರ ಮೂಲದ ಎಂ.ಡಿ. ಸಾವೇದ್ ನದಾಫ್ ಎಂಬಾತನ ಮೂಲಕ 3 ತಿಂಗಳ ಹಿಂದೆ ಬಿಹಾರದಿಂದ ಹೆದ್ದಾರಿ ಕಾಮಗಾರಿಯ ಕಾರ್ಮಿಕನಾಗಿ ಆಗಮಿಸಿದ್ದ ಶಿಬ ಕುಮಾರ್ (36) ಎಂಬಾತ ಶನಿವಾರ ಮುಂಜಾನೆಯಿಂದಲೇ ಮದ್ಯ ಸೇವಿಸಿ ಕೆಲಸಕ್ಕೆ ರಜೆ ಮಾಡಿ ಶೆಡ್ ನಲ್ಲಿ ಮಲಗಿದ್ದಾತ ಅಲ್ಲೇ ಸಾವನ್ನಪ್ಪಿರುವುದಾಗಿ ಸಾವೇದ್ ನದಾಫ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದ್ದು, ಮೃತ ದೇಹವನ್ನು ಬಿಹಾರಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here