ಅಲೆಕ್ಕಾಡಿ: ಕಟ್ಟಡದ ಮೇಲಿನಿಂದ ಬಿದ್ದು ಬಿಹಾರದ ಕಾರ್ಮಿಕ ಸಾವು

0

ಕಾಣಿಯೂರು: ನಿರ್ಮಾಣ ಹಂತದ ಕಟ್ಟಡದ ಮೆಟ್ಟಿಲಿನಿಂದ ರಾತ್ರಿ ವೇಳೆ ಮೂತ್ರವಿಸರ್ಜನೆಗೆಂದು ಕೆಳಗಿಳಿಯುವ ವೇಳೆ ಆಯತಪ್ಪಿ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಅಲೆಕ್ಕಾಡಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.


ಬಿಹಾರ ಮೂಲದ ರಾಜ್ ಕುಮಾರ್ ಪಾಸ್ವಾನ್ (32 ವ.) ಮೃತಪಟ್ಟವರು. ಬಿಹಾರ ಮೂಲದ ಕಾರ್ಮಿಕರ ತಂಡ ಪಂಜ ಭಾಗದಲ್ಲಿ ಕೆಲಸ ನಿರ್ವಹಿಕೊಂಡಿದ್ದು, ರಾಜ್ ಕುಮಾರ್ ಪಾಸ್ವಾನ್ ಜ.1ರ ರಾತ್ರಿ ಅಲೆಕ್ಕಾಡಿಯ ದಯಾನಂದ ಪ್ರಭು ಎಂಬವರ ನಿರ್ಮಾಣ ಹಂತದ ಕಟ್ಟಡದಿಂದ ಮೂತ್ರ ವಿಸರ್ಜನೆಗೆಂದು ಕೆಳಗಿಳಿಯುವ ವೇಳೆ ಮೆಟ್ಟಿಲಿನಿಂದ ಆಯತಪ್ಪಿ ಕೆಳಕ್ಕೆ ಬಿದ್ದು ತಲೆಗೆ ಗಾಯಗೊಂಡಿದ್ದರು. ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಯೋಜನವಾಗಲಿಲ್ಲ ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here