ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ  ವರ್ಷಾವಧಿ  ಜಾತ್ರೋತ್ಸವ ಹಿನ್ನೆಲೆ ಗೊನೆ ಮುಹೂರ್ತ

0

ಪುತ್ತೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ  ಜಾತ್ರೋತ್ಸವ ಅಂಗವಾಗಿ ಗೊನೆ ಮುಹೂರ್ತ ಜ .3 ರಂದು ನಡೆಯಿತು.ಕೃಷ್ಣ ರೈ ಕುದ್ದಾಡಿ ರವರ ತೋಟದಲ್ಲಿ ಬ್ಯಾಂಡ್ ವಾದ್ಯ ಘೋಷದೊಂದಿಗೆ ಕ್ಷೇತ್ರದ ಉದಯ ಕುಮಾರ್ ಪಡುಮಲೆ ಗೊನೆ ಮುಹೂರ್ತ ನೆರವೇರಿಸಿದರು.

ಪ್ರಾರಂಭದಲ್ಲಿ  ಶ್ರೀ ಕ್ಷೇತ್ರದ ಸನ್ನಿಧಿಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಮನೋಜ್ ರೈ ಪೇರಾಲು, ಸದಸ್ಯರುಗಳಾದ  ನಾರಾಯಣ ಭಟ್ ಬೀರ್ನೋಡಿ, ಚಂದ್ರಶೇಖರ ಆಳ್ವ ಪಡುಮಲೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಸಿ.ಯಚ್, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಪ್ರಧಾನ ಕಾರ್ಯದರ್ಶಿ ಜನಾರ್ದನ ಪೂಜಾರಿ ಪದಡ್ಕ , ಕೋಶಾಧಿಕಾರಿ ಸುರೇಶ್ ಪಲ್ಲತ್ತಾರು, ಜಾತ್ರೋತ್ಸವ ಸಮಿತಿ ಉಪಾಧ್ಯಕ್ಷರ ಉದಯ ಕುಮಾರ್ ಪಡುಮಲೆ, ಪುರಂದರ ರೈ ಕುದ್ದಾಡಿ, ರವಿರಾಜ ರೈ ಸಜಂಕಾಡಿ, ಶ್ರೀನಿವಾಸ್ ಗೌಡ ಕನ್ನಯ, ರಾಕೇಶ್ ರೈ ಕುದ್ದಾಡಿ, ಪದ್ಮನಾಭ ರೈ ಅರೆಪ್ಪಾಡಿ, ಚಂದ್ರಶೇಖರ ಭಂಡಾರಿರಾಜೇಶ್ , ಸೀತಾರಾಮ ಗೌಡ ಉಳಯ, ಕಾರ್ಯದರ್ಶಿಳಾದ  ರಘುರಾಮ ಪಾಟಾಳಿ ಶರವು, ರಾಜೇಶ್ ರೈ ಮೇಗಿನಮನೆ ಗಂಗಾಧರ ರೈ ಮೇಗಿನಮನೆ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here