ರಾಮಕುಂಜ: ರಿಕ್ಷಾ ಚಾಲಕ ಶಶಿಧರ ಆಚಾರ್ಯ ನಿಧನ

0

ರಾಮಕುಂಜ: ರಾಮಕುಂಜ ಗ್ರಾಮದ ಕಾಜರೊಕ್ಕು ನಿವಾಸಿ, ರಿಕ್ಷಾ ಚಾಲಕ ಶಶಿಧರ ಆಚಾರ್ಯ (42ವ.) ರವರು ಅನಾರೋಗ್ಯದಿಂದ ಜ.1ರಂದು ಸಂಜೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ತಾಯಿ ಶಾರದಾ, ಪತ್ನಿ ಹರಿಣಾಕ್ಷಿ, ಪುತ್ರರಾದ ಹಾರ್ದಿಕ್, ಸಾತ್ವಿಕ್, ಅಕ್ಕ ಶಾರದಾ ಅವರನ್ನು ಅಗಲಿದ್ದಾರೆ. ಮೃತರ ಮನೆಗೆ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ, ರಾಮಕುಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಸದಸ್ಯರಾದ ಪ್ರಶಾಂತ್ ಆರ್ ಕೆ, ಜಯಶ್ರೀ, ರಿಕ್ಷಾ ಚಾಲಕರು ಹಾಗೂ ಇನ್ನಿತರ ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here