ಸ್ಪಂದನಾ ಟ್ರಸ್ಟ್‌ ನಿಂದ ಆಹಾರ(ದಿನಸಿ) ಕಿಟ್‌ ವಿತರಣೆ

0

ಪುತ್ತೂರು: ಸ್ಪಂದನಾ ಸಹಾಯನಿಧಿ ಸೇನಾ ಟ್ರಸ್ಟ್‌ ನ 18ನೇ ಕಿಟ್‌ ವಿತರಣಾ ಕಾರ್ಯಕ್ರಮ ಡಿ.31ರಂದು ಪುತ್ತೂರು ಲಯನ್ಸ್‌ ಕ್ಲಬ್‌ ನ ಸಭಾಂಗಣದಲ್ಲಿ ನಡೆಯಿತು.


ಸಂಸ್ಥೆಯ ಅಧ್ಯಕ್ಷೆ ಸುಮಿತ್ರಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬನ್ನೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಪರಮೇಶ್ವರಿ ಭಟ್‌, ಲಯನ್ಸ್‌ ಕ್ಲಬ್‌ ನ ಕೋಶಾಧಿಕಾರಿ ಮಂಜುನಾಥ್‌ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಮಾರು 23 ಕುಟುಂಬಗಳಿಗೆ ಆಹಾರದ ದಿನಸಿ ಕಿಟ್‌ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ರುಕ್ಮಯ್ಯ ಕೆ, ಕೋಶಾಧಿಕಾರಿ ಕಾವ್ಯ, ಸಂಚಾಲಕ ಅವಿನಾಶ್‌, ಗೌರವ ಸಲಹೆಗಾರ ಶಿವಶಂಕರ್‌ ಶರ್ಮಾ, ಸದಸ್ಯರಾದ ಶಾಂತಿ, ಪ್ರಮೀಳಾ, ಅಮಿತಾ, ಚೈತ್ರ ಉಪಸ್ಥಿತರಿದ್ದರು. ಶಿವಶಂಕರ್‌ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here