ಪಾಂಡಿಚೇರಿಯಲ್ಲಿ ಪುತ್ತೂರಿನ‌ ನಾಟ್ಯರಂಗದ ಸಂಸ್ಥೆಯಿಂದ ಭರತನಾಟ್ಯ ಪ್ರದರ್ಶನ

0

ಪುತ್ತೂರು: ಪಾಂಡಿಚೇರಿಯಲ್ಲಿ ನಡೆದ 29 ನೇ ಅಂತಾರಾಷ್ಟ್ರೀಯ ಯೋಗ ಸಮ್ಮೇಳನದಲ್ಲಿ ಪುತ್ತೂರಿನ‌ ನಾಟ್ಯರಂಗದ ಸಂಸ್ಥೆಯ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಹಾಗೂ ಬಳಗದವರಿಂದ ಭರತನಾಟ್ಯ ಕಾರ್ಯಕ್ರಮ ನೆರವೇರಿತು.

ಪಾಂಡಿಚೇರಿ ಗವರ್ನರ್ ತಮಿಳ್ ಸೆಲೈ ಸುಂದರರಾಜನ್ ಉದ್ಘಾಟಿಸಿದ ಈ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯದ ಯೋಗ ಪಟುಗಳು ಭಾಗವಹಿಸಿದ್ದರು. ಮಂಜುಳಾ ಸುಬ್ರಹ್ಮಣ್ಯ, ನಿರ್ದೇಶಿಸಿದ ನೃತ್ಯ ಪ್ರದರ್ಶನದಲ್ಲಿ ನಾಟ್ಯರಂಗದ ವಿದ್ಯಾರ್ಥಿಗಳಾದ ಅವನಿ ಬೆಳ್ಳಾರೆ, ರುದ್ಧಿ ವಿಜಯಕುಮಾರ್, ಕೀರ್ತನಾ ವರ್ಮ ಹಾಗೂ ಶರ್ವೀನಾ ಶೆಟ್ಟಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here