ಕೆದಿಲದಲ್ಲಿ ವೀರಮಣಿ‌ ಕಾಳಗ ಯಕ್ಷಗಾನ

0

ಪುತ್ತೂರು: ಕೆದಿಲದ ಸಾಕೇತನಗರದಲ್ಲಿರುವ ಶ್ರೀರಾಮ ಭಜನಾ ಮಂಡಳಿಯ 32ನೇ ವಾರ್ಷಿಕೋತ್ಸವದ ಪ್ರಯುಕ್ತ ಪುತ್ತೂರು ಬಾಲವನದ ಶ್ರೀಸಾಯಿ ಮಹಿಳಾ ಯಕ್ಷಗಾನ ಬಳಗದಿಂದ‌ ವೀರಮಣಿ ಕಾಳಗ ಯಕ್ಷಗಾನ ನಡೆಯಿತು.‌


ಭಾಗವತರಾಗಿ ಕು.ರಚನಾ ಚಿದ್ಗಲ್,ಮದ್ದಳೆಯಲ್ಲಿ‌ ಶ್ರೀಪತಿ ನಾಯಕ್ ಆಜೇರು ಮತ್ತುಚೆಂಡೆಯಲ್ಲಿ ಲಕ್ಷ್ಮೀಶ ಶಗ್ರಿತ್ತಾಯ ಪಂಜ ಸಹಕರಿಸಿದರು.ಶತ್ರುಘ್ನನಾಗಿ ಜ್ಯೋತಿ ಅಶೋಕ್,
ಹನುಮಂತನಾಗಿ ಪ್ರೇಮ ಕಿಶೋರ್,ರುಕ್ಮಾಂಗನಾಗಿ ರೇಣುಕಾ ಗೌಡ,ಶುಭಾಂಗನಾಗಿ ಶ್ರುತಿ ವಿಸ್ಮಿತ್ ಬಲ್ನಾಡು, ವೀರಮಣಿಯಾಗಿ ಶಾಲಿನಿ ಅರುಣ್ ಶೆಟ್ಟಿ, ಈಶ್ವರನಾಗಿ ಸಂದೇಶ್ ದೀಪ್ ರೈ ಕಲ್ಲಂಗಳ, ವೀರಭದ್ರನಾಗಿ‌ ಅನನ್ಯಲಕ್ಷ್ಮಿ ಸಂದೀಪ್,ಭೃಂಗಿಯಾಗಿ ಮಲ್ಲಿಕಾ ಪುರಂದರ, ರಾಮನಾಗಿ ರಾಜೀವಿ ನಾಗೇಶ್,ಕುದುರೆ ದೂತನಾಗಿ ಮಲ್ಲಿಕಾ ಪುರಂದರ್, ಧಮನನಾಗಿ ವಿಸ್ಮಿತಾ ರೈ,ಪುಷ್ಕಳನಾಗಿ‌ ಸುರೇಖಾ ಅಶೋಕ್ ರೈ ಮತ್ತು ಷಣ್ಮುಖನಾಗಿ ಪ್ರಸಕ್ತ ರೈ ಅಭಿನಯಿಸಿದ್ದರು.

LEAVE A REPLY

Please enter your comment!
Please enter your name here