ಈಶ್ವರಮಂಗಲ ಮಖಾಂ ಉರೂಸ್ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಜ.15 ರಿಂದ ಜ.21ರ ತನಕ ನಡೆಯಲಿರುವ ಈಶ್ವರಮಂಗಲ ಮಖಾಂ ಉರೂಸ್ ಹಾಗೂ ನವೀಕೃತ ಮಖಾಂ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಯ್ಯದ್ ಜಲಾಲುದ್ದೀನ್ ತಂಙಳ್ ಆಲ್ ಬುಖಾರಿ ಅವರ ನೇತೃತ್ವದಲ್ಲಿ ನಡೆಯಿತು. ಜಮಾಅತ್ ಅಧ್ಯಕ್ಷ ಟಿ.ಎ ಖಾದರ್ ಹಾಜಿ, ಉರೂಸ್ ಕಮಿಟಿ ಗೌರವಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಜಮಾಅತ್ ಉಪಾಧ್ಯಕ್ಷ ಖಾದರ್ ಪರೋಟ, ಹಮೀದ್ ಹಾಜಿ, ಕಾರ್ಯದರ್ಶಿಗಳಾದ ಮುಹಮ್ಮದ್ ಕೆ ಎಂ, ಅಬ್ಬಾಸ್ ಇ.ಎಚ್, ಕೋಶಾಧಿಕಾರಿ ಇಬ್ರಾಹಿಂ ತಲೆಬೈಲ್, ಉರೂಸ್ ಸಮಿತಿ ಅಧ್ಯಕ್ಷ ಮುಹಮ್ಮದ್ ಟಿ ಎ, ಉಪಾಧ್ಯಕ್ಷರಾದ ಹಾರಿಸ್ ಪಿ ಎಸ್, ಅಬ್ದುಲ್ಲ ಕೆ ಝೆಡ್, ಖಜಾಂಜಿ ರೆಹ್ಮಾನ್ ಮೇನಾಲ, ಕಾರ್ಯದರ್ಶಿಗಳಾದ ಅಬ್ದುಲ್ ಸಲಾಮ್, ಅಬ್ಬು ಎ ಎಚ್, ಝುಬೈರ್ ಬಿ.ಸಿ, ಸಿಯಾಬ್ ಬಿ.ಸಿ, ಉಮ್ಮರ್ ಬಿ.ಸಿ, ಯೂನುಸ್ ಬಟ್ರೋಡಿ, ಸಂಚಾಲಕರಾದ ಸವಾದ್ ಯು ಎಂ, ಮುಸ್ತಫಾ ಮಿನಿ, ಅಕ್ಕು ಬಿ.ಸಿ, ಮುಹಮ್ಮದ್ ಎಸ್ ಎಂ ಹಾಗೂ ಜಮಾಅತ್ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here