ಜ.14: ಕೊಯಿಲದಲ್ಲಿ ಭಜನೋತ್ಸವ

0

ರಾಮಕುಂಜ: ಶ್ರೀ ಸದಾಶಿವ ಭಜನಾ ಪರಿಷತ್, ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನ ಆತೂರು-ಕೊಯಿಲ ಹಾಗೂ ಕಡಬ ತಾಲೂಕು ದೇವಾಲಯಗಳ ಸಹಯೋಗದೊಂದಿಗೆ ಭಜನೋತ್ಸವ ಜ.14ರಂದು ಸಂಜೆ ಕೊಯಿಲ-ಆತೂರು ಶ್ರೀ ಸದಾಶಿವ ದೇವಸ್ಥಾನದ ಮೈದಾನದಲ್ಲಿ ನಡೆಯಲಿದೆ ಎಂದು ಕೊಯಿಲ-ಆತೂರು ಶ್ರೀ ಸದಾಶಿವ ಭಜನಾ ಪರಿಷತ್ ಅಧ್ಯಕ್ಷ ಯದುಶ್ರೀ ಆನೆಗುಂಡಿ ಅವರು ತಿಳಿಸಿದ್ದಾರೆ.


ಸಂಜೆ 3 ರಿಂದ 4.15ರ ತನಕ ಉಪಹಾರ, ಚೆಂಡೆ ತಂಡದಿಂದ ಆಕರ್ಷಕ ಚೆಂಡೆ ಪ್ರದರ್ಶನ, ಸಂಜೆ 4.15ರಿಂದ ಶ್ರೀ ದೇವಳದಿಂದ ಮೈದಾನಕ್ಕೆ ಚೆಂಡೆಯೊಂದಿಗೆ ಭಜನಾ ತಂಡಗಳ ಸ್ವಾಗತ ಮೆರವಣಿಗೆ, ಸಂಜೆ 4.30ರಿಂದ ಏಕಕಾಲದಲ್ಲಿ ಎಲ್ಲಾ ಭಜನಾ ತಂಡಗಳಿಂದ ಮಂಡಲದಲ್ಲಿ ಕುಣಿತ ಭಜನೆ ನಡೆಯಲಿದೆ. ಸಂಜೆ 6 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಕಡಬ ತಾಲೂಕಿನ ದೇವಾಲಯಗಳ ಸಂವರ್ಧನಾ ಸಮಿತಿಯ ಪ್ರಮುಖರು ಹಾಗೂ ಪತಂಜಲಿ ಯೋಗ ಪ್ರಮುಖರ ಉಪಸ್ಥಿತಿಯಲ್ಲಿ ಭಜನಾ ತರಬೇತುದಾರರಿಗೆ ಸನ್ಮಾನ, ಭಜನಾ ತಂಡಗಳಿಗೆ ಗೌರವಾರ್ಪಣೆ, ತಂಡದ ಪ್ರಮುಖರಿಗೆ ಗೌರವಾರ್ಪಣೆ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಶ್ರೀ ದುರ್ಗಾಪೂಜೆ(ಸಂಕ್ರಾಂತಿ ಪೂಜೆ), ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here