ಹಿರಿಯರ ಕ್ರೀಡಾಕೂಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

0

ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಜ.13 ಮತ್ತು 14ರಂದು ನಡೆದ 42ನೇ ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪಾಡ್ಲ ನಿವಾಸಿ, ಪ್ರಸ್ತುತ ಸುಬ್ರಹ್ಮಣ್ಯ ಹೀರೋ ಕೀರ್ತಿ ಬೈಕ್ ಶೋ ರೂಮ್ ನಲ್ಲಿ ಉದ್ಯೋಗಿಯಾಗಿರುವ ಗಂಗಾಧರ ಗೌಡ ಇವರು 40ರ ವಯೋಮಾನದ 800 ಮೀ ಓಟ ಪ್ರಥಮ, 5000 ಮೀ ಮತ್ತು 1500 ಮೀ, 4×100 ಪುರುಷರ ಹಾಗೂ ಮಿಶ್ರ ರಿಲೇಯಲ್ಲಿ ದ್ವಿತೀಯ ಬಹುಮಾನ ಪಡೆದು ಫೆಬ್ರವರಿ 2ರಿಂದ 4ರವರೆಗೆ ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಮೋನಪ್ಪ ಗೌಡ ಮತ್ತು ಶಿವಮ್ಮ ದಂಪತಿ ಪುತ್ರ.

LEAVE A REPLY

Please enter your comment!
Please enter your name here