ಹಿರಿಯರ ಕ್ರೀಡಾಕೂಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

0

ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಜನವರಿ13 ಮತ್ತು 14ರಂದು ನಡೆದ 42ನೇ ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಚಿಕ್ಕ ಮುಡ್ನೂರು ಗ್ರಾಮದ ಬೆದ್ರಾಳ ನಿವಾಸಿ ಕ್ಯಾಂಪ್ಕೋ ಚಾಕಲೇಟ್‌ ಪ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿರುವ ಕಿರಣ್‌ ಕುಮಾರ್‌ ಬೆದ್ರಾಳ ಇವರು 30ರ ವಯೋಮಾನದ ಜವಲಿನ್‌ ನಲ್ಲಿ ಪ್ರಥಮ, 100 ಮೀ. ಓಟದಲ್ಲಿ ತೃತೀಯ, 1500 ಮೀ. ಲ್ಲಿ ತೃತೀಯ ಸ್ಥಾನ ಪಡೆದು ಫೆಬ್ರವರಿ 2ರಿಂದ 4ರವರೆಗೆ ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಚೆನ್ನಪ್ಪ ಗೌಡ ಮತ್ತು ಲಲಿತ ದಂಪತಿ ಪುತ್ರ.

LEAVE A REPLY

Please enter your comment!
Please enter your name here