ಪುತ್ರಶೋಕ ನಿರಂತರ – ತಾಳ್ಮೆಯಿಂದಿರಿ, ನಿಮ್ಮೊಂದಿಗೆ ನಾವಿದ್ದೇವೆ – ಮೃತ ಪ್ರವೀಣ್ ತಾಯಿಗೆ ಶಾಸಕರ‌ ಸಾಂತ್ವನ

0

ಪುತ್ತೂರು: ಅಪಘಾತದಲ್ಲಿ ಪುತ್ರನನ್ನು ಕಳೆದುಕೊಂಡಿದ್ದೀರಿ, ನಿಮ್ಮ‌ ನೋವು ನಮಗೆ ಅರ್ಥವಾಗುತ್ತದೆ. ಪುತ್ರ ಶೋಕ ನಿರಂತರ. ವಿಧಿಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ತಾಳ್ಮೆಯಿಂದ ಇರಿ, ನಿಮ್ಮೊಂದಿಗೆ ನಾವಿದ್ದೇವೆ. ಏನೇ ತೊಂದರೆಯಾದರೂ, ಏನೇ ಸಹಾಯ ಬೇಕಾದರೂ ನನ್ನ ಬಳಿ ಬನ್ನಿ. ಸಹೋದರನ ಸ್ಥಾನದಲ್ಲಿ ನಿಂತು ನಿಮಗೆ ನೆರವಾಗುತ್ತೇನೆ ಎಂದು ಶಾಸಕರು ಇತ್ತೀಚೆಗೆ ಅಪಘಾತದಲ್ಲಿ‌ ಮೃತಪಟ್ಟ ಬೆಟ್ಟಂಪಾಡಿ ಗ್ರಾಮದ ಉಪ್ಪಳಿಗೆ ನಿವಾಸಿ ಪ್ರವೀಣ್ ನಾಯ್ಕ್ ಮನೆಗೆ ಭೇಟಿ ನೀಡಿ ಅವರ ತಾಯಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿ ಆರ್ಥಿಕ ನೆರವು ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕೃಷ್ಣಪ್ರಸಾದ್ ಆಳ್ವ, ನವೀನ್ ರೈ ಚೆಲ್ಯಡ್ಕ, ಸದಾಶಿವ ರೈ ಗುಮ್ಮಟಗದ್ದೆ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here